ಕರ್ನೂಲ್ ಬಸ್ ದುರಂತ: ಕುಡಿದು ಚಿತ್ತಾಗಿದ್ದ ಬೈಕ್‌ ಸವಾರನ ಆವಾಂತರ ಸಿಸಿಟಿವಿಯಲ್ಲಿ ಬಹಿರಂಗ!

ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಬಸ್ ಬೆಂಕಿ ದುರಂತಕ್ಕೆ ಸ್ಫೋಟ ತಿರುವು ದೊರೆತಿದೆ. ಅಪಘಾತಕ್ಕೆ ಮೊದಲು ಬೈಕ್ ಸವಾರನ ಅನುಮಾನಾಸ್ಪದ ವರ್ತನೆಯನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, 22 ವರ್ಷದ ಬಿ. ಶಿವ ಶಂಕರ್ ಮದ್ಯದ ಅಮಲಿನಲ್ಲಿ ಅಜಾಗರೂಕವಾಗಿ ಬೈಕ್ ಸವಾರಿ ಮಾಡುತ್ತಿದ್ದ. ನಂತರ ಆತ ಖಾಸಗಿ ಐಷಾರಾಮಿ ಬಸ್‌ಗೆ ಢಿಕ್ಕಿ ಹೊಡೆದಿದ್ದು, ಅದರ ಪರಿಣಾಮವಾಗಿ ಭೀಕರ ಬೆಂಕಿ ಕಾಣಿಸಿಕೊಂಡಿದೆ.

ವಿ. ಕಾವೇರಿ ಟ್ರಾವೆಲ್ಸ್ ಬಸ್‌ಗೆ ಢಿಕ್ಕಿಯಾದ ಬಳಿಕ, ಶಿವ ಶಂಕರ್ ಅವರ ಬೈಕ್ ಸುಮಾರು 200 ಮೀಟರ್ ಎಳೆಯಲ್ಪಟ್ಟಿತು. ಇಂಧನ ಸೋರಿಕೆಯಿಂದ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಬಸ್ ಸಂಪೂರ್ಣ ಸುಟ್ಟುಹೋಯಿತು. ಘಟನೆಯಲ್ಲಿ ನಿದ್ರೆಯಲ್ಲಿದ್ದ 19 ಪ್ರಯಾಣಿಕರು ಜೀವ ಕಳೆದುಕೊಂಡರು, 27 ಜನರು ಕಿಟಕಿಗಳನ್ನು ಒಡೆದು ಪಾರಾಗಿದ್ದಾರೆ.

ಹೊಸದಾಗಿ ಹೊರಬಂದ ದೃಶ್ಯಾವಳಿಯಲ್ಲಿ, ಶಿವ ಶಂಕರ್ ಬೆಳಗಿನ 2.23ಕ್ಕೆ ಪೆಟ್ರೋಲ್ ಪಂಪ್‌ಗೆ ಬಂದಿದ್ದು, ಅಲ್ಲಿ ಇಂಧನ ತುಂಬಿಸಲು ಸಹಾಯಕನಿಲ್ಲದ ಕಾರಣ ಆತ ಕೋಪದಿಂದ ಬೈಕ್ ತಿರುಗಿಸಿ ಹೊರಟಿರುವುದು ಕಾಣಿಸುತ್ತದೆ. ಕೆಲವು ನಿಮಿಷಗಳ ಬಳಿಕವೇ ಈ ಭೀಕರ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಬದಿ ಸವಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವನಿಂದ ವಿಚಾರಣೆ ನಡೆಯುತ್ತಿದೆ. ಶಿವ ಶಂಕರ್ ಮದ್ಯದ ಅಮಲಿನಲ್ಲಿದ್ದನಾ ಎಂಬುದನ್ನು ದೃಢಪಡಿಸಲು ವಿಧಿವಿಜ್ಞಾನ ಪರೀಕ್ಷೆ ಪ್ರಾರಂಭವಾಗಿದೆ.

ತೆಲಂಗಾಣ ಸಚಿವ ಜೂಪಳ್ಳಿ ಕೃಷ್ಣ ರಾವ್ ಅವರು ಟ್ರಾವೆಲ್ ಏಜೆನ್ಸಿ ಹಾಗೂ ಚಾಲಕರ ನಿರ್ಲಕ್ಷ್ಯವನ್ನೂ ಹೊಣೆಗಾರರನ್ನಾಗಿದ್ದಾರೆ. ಬಸ್ ಚಾಲಕರಾದ ಲಕ್ಷ್ಮಯ್ಯ ಮತ್ತು ಶಿವನಾರಾಯಣ ಅವರನ್ನು ಬಂಧಿಸಿ, ನಿರ್ಲಕ್ಷ್ಯ ಚಾಲನೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಈಗ ದುರಂತದ ನಿಖರ ಕಾರಣ ಪತ್ತೆಹಚ್ಚಲು ಮಳೆ, ಕತ್ತಲೆ ಮತ್ತು ಇಂಧನ ಸೋರಿಕೆಯ ಪಾತ್ರವನ್ನೂ ಪರಿಶೀಲಿಸುತ್ತಿದ್ದಾರೆ.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!