ಮಂಗಳೂರಿನ ಬಜಾಲ್ ಬದ್ರಿಯಾ ಜುಮಾ ಮಸೀದಿಯಲ್ಲಿ 1500ನೇ ಮೀಲಾದುನ್ನಭಿ ಸಂಭ್ರಮ

ಮಂಗಳೂರು: ಬಜಾಲ್‌ನಂತೂರು ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ತಂಗಳ್‌ ಅವರ 1500ನೇ ಈದ್ ಮೀಲಾದುನ್ನಭಿ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಧ್ವಜಾರೋಹಣ ನೆರವೇರಿಸಿ ರ‍್ಯಾಲಿಗೆ ಚಾಲನೆ ನೀಡಿದರು. ಜಮಾಅತ್ ಖತೀಬ ಅಬ್ದುಲ್ ನಾಸಿರ್ ಸಅದ ದುಆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಮೀಲಾದ್ ರ‍್ಯಾಲಿಯ ಉದ್ದೇಶವೇ ಶಾಂತಿ, ಸಮಾಧಾನ ಹಾಗೂ ಸೌಹಾರ್ದತೆಯ ಸಂದೇಶ ಸಾರುವುದು. ಪರಸ್ಪರ ಸೌಹಾರ್ದತೆಯೊಂದಿಗೆ ಬದುಕೋಣ” ಎಂದು ಕರೆ ನೀಡಿದರು.

ವಿದ್ಯಾರ್ಥಿಗಳ ಕಲಾತ್ಮಕ ಪ್ರದರ್ಶನ

ರ‍್ಯಾಲಿಯಲ್ಲಿ ಹಯತುಲ್ ಇಸ್ಲಾಂ ಮದರಸ (ಬಜಾಲ್ ನಂತೂರ್) ಹಾಗೂ ಫೈಝಲ್ ನಗರ ನಮಾವುಲ್ ಇಸ್ಲಾಂ ಮದರಸದ ಮಕ್ಕಳು ಸ್ಕೌಟ್ ಮೆರವಣಿಗೆ, ಫ್ಲವರ್ ಶೋ ಹಾಗೂ ದಫ್ ಪ್ರದರ್ಶನ ನೀಡಿದರು. ತರ್ಬಿಯತುಲ್ ಇಸ್ಲಾಂ ದರ್ಸ್ ನಲ್ಲಿ ಕಲಿಯುವ ಮುತಹಲ್ಲಿಮ್‌ಗಳು ಸಹ ಭಾಗವಹಿಸಿ ಕಾರ್ಯಕ್ರಮಕ್ಕೆ ಭಕ್ತಿ ಹಾಗೂ ಸಂಭ್ರಮವನ್ನು ತುಂಬಿದರು.

ರ‍್ಯಾಲಿಯಲ್ಲಿ ಸಿಹಿ
ರ‍್ಯಾಲಿಯ ಪಥದ ಉದ್ದಕ್ಕೂ ಭಾಗವಹಿಸಿದವರಿಗೆ ಐಸ್‌ಕ್ರೀಮ್, ಚಾಕ್ಲೆಟ್, ತಂಪು ಪಾನೀಯ, ಫಲೂದ, ಬಿರಿಯಾನಿ, ಹಣ್ಣು ಅಂಪಲು ಸೇರಿದಂತೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷರು ಅಶ್ರಫ್ ಕೆ, ಹನೀಫ್ ಎಚ್.ಎಸ್, ಎಂ.ಎಚ್. ಮುಹಮ್ಮದ್ ಫೈಝಲ್ ನಗರ್, ಪ್ರ. ಕಾರ್ಯದರ್ಶಿ ಅಬ್ದುಲ್ ಹಮೀದ್, ಕೊಶಾಧಿಕಾರಿ ಅಬ್ದುಲ್ ಸಲಾಂ, ಸಂಚಾಲಕರು ಬಿ. ಪಕೃದ್ದಿನ್, ಮಾಜಿ ಅಧ್ಯಕ್ಷ ಬಿ.ಎನ್. ಅಬ್ಬಾಸ್, ಗೌಸಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಕ್, ಖತೀಬ ಇಸಾಕ್ ಹಮೀದಿ, ಉಪಾಧ್ಯಕ್ಷ ಮುಹಮ್ಮದ್ ರಫೀಕ್, ತರ್ಬಿಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ಹುಸೇನ್ (ಶಾಂತಿನಗರ), ಜೆ.ಎಫ್. ಅಸೋಸಿಯೇಷನ್ ಅಧ್ಯಕ್ಷ ನಝೀರ್ ಬಜಾಲ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಹಮ್ಮಬ್ಬಾ ಮೋನಕ, ನಾಸೀರ್ ಎನ್.ಎಸ್.ಆರ್** ಹಾಗೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸದರ್ ಮುಹಲ್ಲಿಮ್ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿದರು. ಹಕೀಮ್ ಮದನಿ ನಿರೂಪಿಸಿದರು. ಅಬೂಬಕ್ಕರ್ ಸಖಾಫಿ ವಂದಿಸಿದರು.

error: Content is protected !!