ಜಾಗದ ನಕಲಿ ದಾಖಲೆ ಸೃಷ್ಟಿಸಿ 1ಕೋಟಿ 2.75 ಲಕ್ಷ ರೂ. ವಂಚಿಸಿದ ದಂಪತಿ!

ಕಾಪು: ಜಾಗದ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ 45 ಲಕ್ಷ ರೂ. ಸಾಲ ಸಹಿತ ಒಟ್ಟು 1 ಕೋಟಿ 2.75 ಲಕ್ಷ ರೂ. ವಂಚಿಸಿದ ದಂಪತಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಮಲ್ಲಾರು ಕೊಂಬಗುಡ್ಡೆ ನಿವಾಸಿ ರಿಯಾನತ್ ಬಾನು (25) ಹಾಗೂ ಆಕೆಯ ಪತಿ ಉಚ್ಚಿಲ ಬಡಾ ಗ್ರಾಮ ಭಾಸ್ಕರ್ ನಗರ ನಿವಾಸಿ ನೂಮನ್ ಇಸ್ಮಾಯಿಲ್ (33) ಬಂಧಿತ ದಂಪತಿ.

2024ರ ಫೆ. 21ರಿಂದ ಮಾ. 27ರ ನಡುವೆ ಆರೋಪಿಗಳಾದ ರಿಯಾನತ್ ಬಾನು ಮತ್ತು ನೂಮನ್ ಇಸ್ಮಾಯಿಲ್ ಅವರು ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ವಂಚಿಸುವ ಉದ್ದೇಶದಿಂದಲೇ ದಿನೇಶ್ ಮತ್ತು ರಾಜೇಶ್ ಎಂಬವರನ್ನು ಜಾಮೀನುದಾರರನ್ನಾಗಿಸಿಕೊಂಡು ಜಾಗ ಅಡವಿರಿಸಿ, 45 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನು ಪಾವತಿಸಿದ್ದು ಅನಂತರದ ಕಂತನ್ನು ಪಾವತಿ ಮಾಡದೇ ಬಾಕಿಯಿರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಸಂಘದವರಿಗೆ ಆರೋಪಿಗಳ ಮೇಲೆ ಸಂಶಯ ಬಂದು ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ, ಆರೋಪಿಗಳು ಸಾಲ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ಶಕುಂತಳಾ ಆ‌ರ್. ಅವರ ಜಾಗದ ಕ್ರಯಚೀಟಿಯ ದಸ್ತಾವೇಜು, ಒಪ್ಪಂದಕಾರರು, ಉಪ ನೋಂದಣಾಧಿಕಾರಿಯ ಸಹಿ, ಅವರ ಆಫೀಸಿನ ಮೊಹರು, ಋಣ ಭಾರ ಪತ್ರ, ಅದರಲ್ಲಿರುವ ಕಂದಾಯ ಅಧಿಕಾರಿಗಳ ಸಹಿ, ಮೊಹರು ಎಲ್ಲವನ್ನೂ ಪೋರ್ಜರಿ ಮಾಡಿ ಬಳಸಿಕೊಂಡು ಸುಳ್ಳು ದಾಖಲೆಗಳನ್ನು ತಯಾರಿಸಿ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಈ ಕುರಿತು ಸಂಘದ ಶಾಖಾ ಪ್ರಧಾನ ವ್ಯವಸ್ಥಾಪಕ ಮೊದಿನ್ ಡಿ ಖಾನ್ ಅವರು ಆರೋಪಿಗಳಾದ ರಿಯಾನತ್ ಬಾನು ಮತ್ತು ನೂಮನ್ ಇಸ್ಮಾಯಿಲ್ ಸುಳ್ಳು ಮತ್ತು ಪೋರ್ಜರಿ ದಾಖಲೆ ನೀಡಿ 45 ಲಕ್ಷ ರೂ. ಪಡೆದು ಸಂಘಕ್ಕೆ ಮೋಸ, ಮತ್ತು ವಂಚನೆ ಮಾಡಿದ್ದಾರೆ ಎಂದು ಕಳೆದ ಜ.3 ರಂದು ಕಾಪು ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಆರೋಪಿ ದಂಪತಿ ಕೇರಳದ ಮಲಪ್ಪುರಂ ಜಿಲ್ಲೆಯ ಕೋಟಕಲ್‌ನಲ್ಲಿ ಅವಿತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕ್ರೈಂ ವಿಭಾಗದ ಸಿಬ್ಬಂದಿ ವರ್ಗದ ರಫೀಕ್, ರಾಘು, ಮೋಹನ್ ಮತ್ತೆ ಮಲಪ್ಪುರಂಗೆ ತೆರಳಿ ಅಲ್ಲಿ ವೇಷ ಮರೆಮಾಚಿ ಸುಮಾರು ಒಂದು ತಿಂಗಳು ಆರೋಪಿಗಳ ಚಲನವಲನಗಳ ತೀವ್ರ ಬಗ್ಗೆ ನಿಗಾ ಇರಿಸಿದ್ದರು. ಒಂದು ತಿಂಗಳ ಸತತ ಪರಿಶ್ರಮದ ಬಳಿಕ ಆ. 12ರಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಮತ್ತಷ್ಟು ವಿಚಾರಣೆಗೊಳಪಡಿಸಿದ ಸಂದರ್ಭ ಅವರ ವಂಚನಾ ಜಾಲ ಬೆಳಕಿಗೆ ಬಂದಿದೆ.

ಕಸ್ಟಡಿ ವಿಚಾರಣೆಯ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!