ಗಾಯಾಳು ಉರಗನಿಗೆ ಚಿಕಿತ್ಸೆ: ಖುಷಿಯಿಂದ ಭುಸ್ಸೆಂದ ನಾಗ!

ಮಂಗಳೂರು: ಅಸ್ವಸ್ಥಗೊಂಡಿದ್ದಲ್ಲದೆ, ಒಂದು ಕಣ್ಣನ್ನು ಕಳೆದುಕೊಂಡಿದ್ದ ಸುಮಾರು 12ರಿಂದ 15 ಪ್ರಾಯದ, ಆರಡಿ ಉದ್ದದ ನಾಗರ ಹಾವಿಗೆ ಪಶುವೈದ್ಯರು ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ.


ಗಾಯಗೊಂಡಿದ್ದ ಈ ಹಾವನ್ನು ವನ್ಯಜೀವಿ ರಕ್ಷಕ ಧೀರಜ್‌ ಎನ್ನುವವರು ಬಂಟ್ವಾಳ ಭಾಗದಲ್ಲಿ ಹಿಡಿದು ಪಶುವೈದ್ಯ ದಂಪತಿ ಡಾ|ಯಶಸ್ವಿ ನಾರಾವಿ ಹಾಗೂ ಡಾ|ಮೇಘನಾ ಪೆಮ್ಮಯ್ಯರಿಗೆ ನೀಡಿದ್ದರು. ಇಬ್ಬರೂ ಜಾಗರೂಕತೆಯಿಂದ ಚಿಕಿತ್ಸೆ ನೀಡಿ ನಾಲ್ಕು ದಿನಗಳ ಕಾಲ ಕಾಳಜಿ ವಹಿಸಿ ಅವು ಸ್ವತಂತ್ರವಾಗಿ ಓಡಾಟ ನಡೆಸಲಾರಂಭಿಸಿದ ಬಳಿಕ ಕಾಡಿಗೆ ಬಿಡಲಾಗಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!