ಮಂಗಳೂರು: ರಹಿಮಾನ್ ಹತ್ಯೆಯಲ್ಲಿ ಕೆಲವು ವ್ಯಕ್ತಿಗತ ಕಾರಣ ಇದ್ದು ಈ ಬಗ್ಗೆ ತನಿಖೆ ಆಗಲಿ. ಆದರೆ ತನಿಖೆಗೂ ಮೊದಲೇ ವಿಎಚ್ಪಿ, ಬಜರಂಗದಳ ಮುಖಂಡರು, ಕಾರ್ಯಕರ್ತರ ಮೇಲೆ ಯಾಕೆ ಆರೋಪ ಮಾಡ್ತಾ ಇದ್ದೀರಿ? ಈ ಸಂಘಟನೆಯನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಾಂಗ್ರೆಸನ್ನು ಪ್ರಶ್ನಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಸಾಗಾಟ ಮಾಡುತ್ತಿದ್ದ ಕಬೀರ್ ಪೊಲೀಸರ ಮೇಲೆ ವಾಹನ ಹತ್ತಿಸಲು ಹೋದಾಗ ಎನ್ಕೌಂಟರ್ ಆಯಿತು. ಆದರೆ ನಕ್ಸಲ್ ಅಂತ ಶೂಟ್ ಮಾಡಿದವರನ್ನ ಜೈಲಿಗೆ ಕಳಿಸಿದ್ರಿ ಆದರೆ ಸರ್ಕಾರ ಕಬೀರ್ ಗೆ 10 ಲಕ್ಷ ಪರಿಹಾರ ಕೊಟ್ಟು ಓಲೈಕೆ ಮಾಡಿಕೊಂಡಿತು. ರಹಿಮಾನ್ ಹತ್ಯೆಯನ್ನು ಹತ್ಯೆ ಎಂದು ನೋಡುವ ಕಾಂಗ್ರೆಸಿಗರು, ಸುಹಾಸ್ ಹತ್ಯೆ ಹತ್ಯೆಯಾಗಿ ಕಾಣುವುದಿಲ್ಲ. ಅವನನ್ನು ಕ್ರಿಮಿನಲ್, ರೌಡಿಶೀಟರ್ ಎಂದು ಕರೆಯುವ ಔಚಿತ್ರವೇನು? ರೆಹಮಾನ್ ಹತ್ಯೆಯಲ್ಲಿ ಕೆಲವು ವ್ಯಕ್ತಿಗತ ಕಾರಣ ಇದೆ, ತನಿಖೆ ಆಗಲಿ ಆದರೆ ಅದಕ್ಕೂ ಮೊದಲೇ ವಿಎಚ್ ಪಿ, ಬಜರಂಗದಳ ಮುಖಂಡರ ಮೇಲೆ ಆರೋಪ ಮಾಡಿವುದು ಸರಿಯಲ್ಲ. ಈ ಹತ್ಯೆಯನ್ನೇ ಮುಂದಿಟ್ಟು ಸಂಘಟನೆ ಟಾರ್ಗೆಟ್ ಮತ್ತು ಮುಗಿಸುವ ಕೆಲಸಕ್ಕೆ ನಾವು ಅವಕಾಶ ಕೊಡಲ್ಲ. ವಿಎಚ್ ಪಿ ಹಿಂದೂಗಳ ಸಂಘಟನೆ, ಅದು ಹಿಂದೂಗಳನ್ನ ಒಗ್ಗಟ್ಟು ಮಾಡ್ತಿದೆ ಯಾವುದೇ ಹತ್ಯೆಯನ್ನು ನಾವು ಸಮರ್ಥನೆ ಮಾಡಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿ ಸುಹಾಸ್ ಶೆಟ್ಟಿ, ಅಬ್ದುಲ್ ರೆಹಮಾನ್ ಹತ್ಯೆ ಸೇರಿದಂತೆ ಸರಣಿ ಘಟನೆಗಳ ಅಧ್ಯಯನ ಮಾಡಲಿದೆ. ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಪಕ್ಷ ನಿಯೋಗ ಬರಲಿದೆ, ಜಿಲ್ಲೆಯಲ್ಲಿ ಶಾಂತಿ ನೆಲೆಸಲೇ ಬೇಕು, ಇತ್ತೀಚೆಗೆ ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ಅವರ ನಿಯೋಗ ಕೂಡ ಶಾಂತಿ ಪ್ರಸ್ತಾಪನೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಶಾಂತಿಗಾಗಿ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಹಾಗಾಗಿ ಪೊಲೀಸರಿಗೆ ನನ್ನ ಕೆಲವು ಸಲಹೆಗಳನ್ನು ಕೊಡ್ತಾ ಇದೀನಿ ಎಂದು ಹೇಳಿದರು.
ಎಸ್ಪಿಯರು ಬಜರಂದಳ, ವಿಚ್ಪಿಯನ್ನು ಕಮ್ಯೂನಲ್ ಆರ್ಗನೈಸೇಶನ್ ಮತ್ತು ಕಮ್ಯುನಲ್ ವ್ಯಕ್ತಿಗಳು ಅಂದಿದ್ದೀರಿ, ಎಸ್ಪಿ, ಬಜರಂಗದಳ ಕಮ್ಯುನಲ್ ಅಂತ ಹೇಗೆ ಹೇಳ್ತೀರಿ ನಾವು ಹಿಂದೂ ಪರ ಸಂಘಟನೆ ಅಂತ ಹೇಳಿ ಒಪ್ಪಿಕೊಳ್ತೀವಿ ಹಿಂದೂ ವಿಚಾರಧಾರೆಗಳೇ ಕಮ್ಯುನಲ್ ಅಲ್ಲ, ಹೇಗೆ ಕಮ್ಯುನಲ್ ಅಂತೀರಿ. ಅನ್ಯಮತದಲ್ಲಿ ದೇವರಲ್ಲ, ಪ್ರವಾದಿ ಅಂತ ಹೇಳಿದ್ರು ಕೊಂದು ಬಿಡ್ತಾರೆ. ಸಾಮಾಜಿಕ ತಾಣಗಳಲ್ಲಿ ಪ್ರಚೋದನೆ ಮಾಡೋರ ಮೇಲೆ ಕ್ರಮ ಕೈಗೊಳ್ತಾ ಇದ್ದೀರಿ. ಆದರೆ ಕೋಮುವಾದ ಭಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಆಕ್ಷನ್ ತೆಗೋತಿರಿ ಎಂದು ಪ್ರಶ್ನೆ ಮಾಡಿದರು. ಎಸ್ಪಿ ಮತ್ತು ಕಮಿಷನರ್ ನಿಮ್ಮ ಇಲಾಖೆಯ ಕೆಲವರು ಇಂಥದರ ಭಾಗವಾಗಿರೋದನ್ನ ತಪ್ಪಿಸಿ, ಸಜ್ಜನರು ಮತ್ತು ದುರ್ಜನರನ್ನ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗ್ತಾ ಇದೀರಿ ಇದು ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮಾರಕವಾಗುತ್ತೆ ಎಂದು ಹೇಳಿದರು.
ವೇದಿಕೆಯಲ್ಲಿ ಹಲವು ಮುಖಂಡರಿದ್ದರು.