ಮಂಗಳೂರು: ಕಳೆದ ಚುನಾವಣೆಯಲ್ಲಿ ಮುಸ್ಲಿಂ ಓಟಿಗೋಸ್ಕರ ಬಜರಂಗದಳವನ್ನು ನಿಷೇಧ ಮಾಡಲು ಹೊರಟ ಕಾಂಗ್ರೆಸ್ ಸರಕಾರ ಕಳೆದ ಎರಡು ವರ್ಷಗಳಿಂದ ವಿರಂತರವಾಗಿ ರಾಜ್ಯದಾದ್ಯಂತ ಕಾರ್ಯಕರ್ತರು, ಸಂಘಟನೆಯ ಪ್ರಮುಖರ ಮೇಲೆ ಸುಳ್ಳು, ಕೇಸ್ಗಳನ್ನು ದಾಖಲಿಸಿ ಸಂಘಟನೆಯ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಬಜರಂಗದಳ, ವಿಶ್ವಹಿಂದೂ ಪರಿಷತ್ ಆರೋಪಿಸಿದೆ.
ಇಂದು ಮಧ್ಯಾಹ್ನ ಕದ್ರಿಯ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ,ಬಂಟ್ವಾಳದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಹತ್ಯೆ ವೈಯಕ್ತಿಕ ಕಾರಣ ಅಥವಾ ಮರಳು ದಂಧೆಯಿಂದ ನಡೆದಿರಬಹುದು ಎಂದು ಸೋಷಿಯಲ್ ಮೀಡಿಯಾಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಚರ್ಚೆಯಾಗ್ತಾ ಇದೆ. ಈ ಬಗ್ಗೆ ತನಿಖೆಯಾಗಲಿ. ಆ ಹತ್ಯೆ ವಿಚಾರದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ರಾಜ್ಯ ಸರಕಾರ ಮುಸ್ಲಿಮರ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ನಮ್ಮ ಸಂಘಟನೆ ಕೊಲೆ ಮಾಡುವ ಸಂಘಟನೆಯಲ್ಲ, ಅಲ್ಲದೆ ಇಂತಹಾ ಕೃತ್ಯಗಳನ್ನು ಸಮರ್ಥನೆ ಮಾಡುವವರಲ್ಲ. ನಮ್ಮದು ದೇಶ ಭಕ್ತ ಸಂಘಟನೆ. ಆದರೆ ಹಿಂದೂ ಸಂಘಟನೆಯ ನಾಯಕರ, ಕಾರ್ಯಕರ್ತರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಸರ್ಕಾರ ಹುನ್ನಾರ ನಡೆಸಿದೆ ಎಂದವರು ಆರೋಪಿಸಿದರು.
ರಹಿಮಾನ್ ಹತ್ಯೆ ಪ್ರಕರಣದಲ್ಲಿ ಭರತ ಕುಮ್ಡೇಲ್ ಅವರನ್ನು ಸಿಲುಕಿಸಲು ಪೊಲೀಸ ಇಲಾಖೆ ಯತ್ನಿಸಿದೆ. ಈಗಾಗಲೇ ಭರತ್ ಕುಮ್ಮೆಲ್ ಮನೆಯ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಮುಸ್ಲಿಮರ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಓಟಿಗೋಸ್ಕರ ಬಜರಂಗದಳವನ್ನು ನಿಷೇಧ ಮಾಡಲು ಹೊರಟ ಕಾಂಗ್ರೆಸ್ ಸರಕಾರ ಕಳೆದ ಎರಡು ವರ್ಷಗಳಿಂದ ವಿರಂತರವಾಗಿ ರಾಜ್ಯದಾದ್ಯಂತ ಕಾರ್ಯಕರ್ತರು, ಸಂಘಟನೆಯ ಪ್ರಮುಖರ ಮೇಲೆ ಸುಳ್ಳು, ಕೇಸ್ಗಳನ್ನು ದಾಖಲಿಸಿ ಸಂಘಟನೆಯ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಮಾಡುತ್ತಿದೆ. ಮುಂದುವರಿದ ಭಾಗವಾಗಿ ಕರಾವಳಿಯ ಭಾಗದಲ್ಲಿ ಬಜರಂಗದಳವನ್ನು ಗುರಿಯಾಗಿಟ್ಟುಕೊಂಡು ಕಾರ್ಯಕರ್ತರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಕರಣಗಳನ್ನು ದಾಖಲಿಸುವುದು, ರೌಡಿ ಶೀಟರ್ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದು, ಗೂಂಡಾ ಕಾಯ್ದೆ ಹಾಕುವುದು ಇದೀಗ ಹತ್ಯೆ ಪ್ರಕರಣದಲ್ಲಿ ಬಜರಂಗದಳದ ಪ್ರಮುಖರಾದ ಭರತ್ ಕುಮೇಲ್ ರವರನ್ನು ಸೇರಿಸುತ್ತಿರುವುದು ಕಂಡುಬರುತ್ತಿದೆ. ಬಜರಂಗದಳ ರಾಷ್ಟ್ರ ಭಕ್ಷ ಸಾಮಾಜಿಕ ಸಂಘಟನೆಯಾಗಿದ್ದು ನೂರಾರು ಸೇವಾ ಚಟುವಟಿಕೆಗಳು ಸಾವಿರಾರು ಗೋವುಗಳ ರಕ್ಷಣೆ ಹೆಣ್ಣು ಮಕ್ಕಳ ರಕ್ಷಣೆ, ಮುಂತಾದ ಹತ್ತಾರು ಕಾರ್ಯಗಳನ್ನು ಮಾಡಿಕೊಂಡು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿದೆ. ರಹಿಮಾನ್ ಹತ್ಯೆ ಪ್ರಕರಣವನ್ನು ಮುಂದಿಟ್ಟು ಕಾರ್ಯಕರ್ತರ ಮೇಲೆ ಈ ರೀತಿ ದನ್ನಾಳಿಕೆ ಮಾಡುವುದು ಸರಿಯಲ್ಲ. ಭರತ್ ಕುಮ್ಮೆಲ್ ರನ್ನು ಈ ಪ್ರಕರಣದಲ್ಲಿ ಸೇರಿಸಿದಲ್ಲಿ ಎಲ್ಲಾ ಜಿಲ್ಲಾ ಕೇಂದ್ರ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರಭಂಜನ್ ಸೂರ್ಯ ಎಚ್ಚರಿಕೆ ನೀಡಿದ್ದಾರೆ.
ಬಜರಂಗದಳದ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್ ಮಾತನಾಡಿ, ನಮ್ಮ ಸಂಘಟನೆಯ ಹಿರಿಯ 84 ವರ್ಷದ ಪೂವಪ್ಪರನ್ನು ಪೊಲೀಸರು ನಡುರಾತ್ರಿ ಪ್ರಶ್ನಿಸಿದ್ದಾರೆ. ರಾತ್ರಿ ಸೈರನ್ ಹಾಕಿ ಕಾರ್ಯಕರ್ತರ ಮನೆಗೆ ಹೋಗುವುದು, ಅವರಿಗೆ ಧಮ್ಕಿ ಹಾಕುವುದು, ನಿಮ್ಮ ಮೇಲೆ ರೌಡಿ ಶೀಟ್ ತೆರೆಯುವುದಾಗಿ ಬೆದರಿಸುವುದು ನಡೆಯುತ್ತಿದೆ. ಕಡಬದಲ್ಲಿ ಒಬ್ಬ ಯುವಕನ ಮೇಲೆ ಸಣ್ಣಪುಟ್ಟ ಕೇಸ್ಗಳಿದ್ದು ಅವನನ್ನೂ ಗಡಿಪಾರು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಭಾಗ ಸಂಯೋಜಕರು ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕರು ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.