“ಎಮ್ಮೆಕೆರೆ ಈಜುಕೊಳದ ಬಗ್ಗೆ ಅಪಪ್ರಚಾರ ಸರಿಯಲ್ಲ“ -ನಿರ್ದೇಶಕ ನವೀನ್

ಮಂಗಳೂರು: “ಡಿಸೆಂಬರ್ 01 2024ರಿಂದ ಟೆಂಡ‌ರ್ ಮುಖಾಂತರ ಎಮ್ಮೆಕೆರೆ ಈಜುಕೊಳದ ಪೂರ್ಣ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಪಡೆದುಕೊಂಡಿದ್ದು ಅದರಂತೆಯೇ ಈ ಈಜುಕೊಳದಲ್ಲಿ ಸಾರ್ವಜನಿಕರಿಗೆ. ಮಕ್ಕಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರವೇಶದ ಅವಕಾಶವಿದೆ. ಇಲ್ಲಿ ಈಜು ಗೊತ್ತಿಲ್ಲದವರಿಗೆ ಈಜು ಕಲಿಸಲು ಹಾಗೂ ಕ್ರೀಡಾಪಟುಗಳಿಗೆ ತರಬೇತಿ ನೀಡುವ ನಿಟ್ಟಿನಿಂದ ಲೆವೆಲ್ 1 ರಿಂದ ಲೆವೆಲ್ 7 ರವರೆಗಿನ High Performance ತರಬೇತಿ ನೀಡುವ NIS ತರಬೇತುದಾರರನ್ನು ನಿಯೋಜಿಸಿದ್ದೇವೆ. ಅಲ್ಲದೆ ಮುಖ್ಯ ಈಜುಕೊಳದಲ್ಲಿ 10 ಟ್ರಾಕ್ ಇದ್ದು ತಾತ್ಕಾಲಿಕವಾಗಿ 7 ಟ್ರಾಕ್ ಕ್ರೀಡಾಪಟುಗಳಿಗೆ 1 ಟ್ರಾಕ್ Lap Swimmers ಹಾಗೂ 2 ಟ್ರಾಕ್ ಸಾರ್ವಜನಿಕರಿಗೆ ಕಲ್ಪಿಸಿದ್ದು ಮುಂಬರುವ ದಿನಗಳಲ್ಲಿ ಕ್ರೀಡಾಪಟುಗಳು ಅಧಿಕವಾದಲ್ಲಿ ಅವರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ“ ಎಂದು ಈಜುಕೊಳದ ನಿರ್ದೇಶಕ ನವೀನ್ ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಸ್ವಿಮಿಂಗ್ ಅಸೋಸೇಶನ್ ನನ್ನು ತುಂಬಾ ಗೌರವಿಸುತ್ತೇನೆ. ಏಕೆಂದರೆ ನಾನು ಕೂಡ ಅವರ ಮೆಂಬರ್ ಆಗಿದ್ದೆ. ಅದರ ಗೌರವಾಧ್ಯಕ್ಷರಾದ ಧರ್ಮೇಂದ್ರ ಹಾಗೂ ಅಧ್ಯಕ್ಷರಾದ ಯತೀಶ್ ಬೈಕಂಪಾಡಿ ಅವರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಆದರೆ ಮಂಗಳ ಸ್ವಿಮಿಂಗ್ ಕ್ಲಬ್ ನವರ ನಮ್ಮ ವೈಯುಕ್ತಿಕ ಕಾರಣದಿಂದ ದಕ್ಷಿಣ ಕನ್ನಡ ಸ್ವಿಮಿಂಗ್ ಅಸೋಸೇಶನ್‌ನನ್ನು ದುರ್ಬಳಕೆ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿರುವ 4 ಈಜು ಸಂಸ್ಥೆಗಳಲ್ಲಿ ಜೈಹಿಂದ್ ಕ್ಲಬ್, ಮಂಗಳೂರು ಅಕ್ವಾಟಿಕ್ ಕ್ಲಬ್, ವಿ ವನ್ ಆಕ್ವಾಟಿಕ್ ಕ್ಲಬ್ ಈಜು ಪಟುಗಳಿಗೆ ಹಾಗೂ ಹೆತ್ತವರಿಗೆ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಿದರು.

ಡಿಸೆಂಬರ್ 1, 2024 ರಿಂದ ಫೂಲ್‌ನ್ನು ಓಪನ್ ಪ್ಲಬಿಕ್ ಟೆಂಡರ್ ಮೂಲಕ 50 ಲಕ್ಷ ಸೆಕ್ಯೂರಿಟ್ ಡೆಪಾಸಿಟ್ ಹಾಗೂ ಮಾಸಿಕ ಶುಲ್ಕ 2,61,101/- ಪಾವತಿಸಿ ಪೂರ್ಣ ನಿರ್ವಾಹಣೆಯನ್ನು ಪಡೆದುಕೊಂಡಿದ್ದೇವೆ ಎಂದರು .ಆ ಸಮಯದಲ್ಲಿ ಕಾರ್ಪೊರೇಶನ್ ಸ್ವಿಮಿಂಗ್ ಪೂಲ್ ನಿರ್ವಾಹಣೆಗಾಗಿ ಮುಚ್ಚಳಪಟ್ಟಿದ್ದರಿಂದ ಮಂಗಳ ಸ್ವಿಮಿಂಗ್ ಕ್ಲಬ್ ಹಾಗೂ ಜೈಹಿಂದ್ ಕ್ಲಬ್‌ಗೆ ತರಬೇತಿ ನೀಡಲು ತಾತ್ಕಲಿಕವಾಗಿ ಅವಕಾಶವನ್ನು ಕೊಟ್ಟಿದ್ದೇವೆ. ಅದರಂತೆ ಕಾರ್ಪೋರೇಶನ್ ಪೂಲ್ ತೆರೆಯುವಾಗ ಜೈಹಿಂದ್ ಕ್ಲಬ್‌ನವರು ಮರಳಿ ಕಾರ್ಪೋರೇಶನ್ ಪೂಲ್‌ಗೆ ಹೋದರು. ಆದರೆ ಮಂಗಳ ಸ್ವಿಮಿಂಗ್ ಕ್ಲಬ್‌ನವರು ತರಬೇತಿಗಾಗಿ ಇಲ್ಲಿಯೇ ಅವಕಾಶಕ್ಕೆ ವಿನಂತಿಸಿದ್ದಾರೆ. ಅದಕ್ಕೆ ಸಂಜೆ 6.30 ರಿಂದ 8.00 ರವರೆಗೆ ಅವಕಾಶಕೊಟ್ಟಿದ್ದೇವೆ. ಆದರೆ ಮಂಗಳ ಸ್ವಿಮಿಂಗ್ ಕ್ಲಬ್‌ನವರು ನಿಯಮವನ್ನು ಮೀರಿ ಸುಮಾರು ರಾತ್ರಿ 09.00 ಗಂಟೆಗೂ ಹೆಚ್ಚು ತರಬೇತಿಯನ್ನು ಕೊಡುತ್ತಿದ್ದರು. ಅದಕ್ಕೆ ನಮ್ಮ ಯಾವುದೇ ಅಭ್ಯಂತರವೂ ಇರಲಿಲ್ಲ. ಈ ಸಮಯದಲ್ಲಿ ನಾವು High Performance ತರಬೇತಿಗೆ ಎನ್.ಐ.ಎಸ್. ವಿದ್ಯಾಭ್ಯಾಸ ಹೊಂದಿದ್ದ ವಿಶ್ವಮಿತ್ರ ಅವಾರ್ಡ್ ಪಡೆದ ತರಬೇತುದಾರನನ್ನು ನಮ್ಮ ಸಂಸ್ಥೆಯಿಂದ ನಿಯೋಜಿಸಿದ್ದೇವೆ. ಆದರೆ ತಾಂತ್ರಿಕ ಕಾರಣದಿಂದ ಮಂಗಳ ಸ್ವಿಮಿಂಗ್ ಫೂಲ್‌ನ ಸಮಯವನ್ನು ಬದಲಾವಣೆ ಮಾಡಲು ಕೇಳಿದಾಗ ಅದಕ್ಕೆ ಅವರು ಒಪ್ಪದೆ ಕಾರ್ಪೋರೇಶನ್ ಪೂಲ್‌ಗೆ ಹೋಗುತ್ತೇವೆ ಎಂದು ಹೋದರು ಎಂದರು.

ವೈಯುಕ್ತಿಕ ಕಾರಣವನ್ನು ಹಿಡಿದು ದಕ್ಷಿಣ ಕನ್ನಡ ಸ್ವಿಮಿಂಗ್ ಅಸೋಸೇಶನ್ ಮುಖಾಂತರ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಮ್ಮ ಮಕ್ಕಳಿಗೆ ಉಚಿತ ಪ್ರವೇಶ ಹಾಗೂ ತರಬೇತುದಾರರಿಗೆ ತರಬೇತು ಮಾಡಲು ಅವಕಾಶ ಕೊಡಬೇಕಾಗಿ ಒತ್ತಡ ಹಾಕಿದ್ದಾರೆ. ಅದರ ಪ್ರಕಾರ ನಾವು ಈ ಈಜು ಸಂಸ್ಥೆಯನ್ನು ನಷ್ಟದಲ್ಲಿ ನಡೆಸುತ್ತಿದ್ದರು ಜನಪ್ರತಿನಿಧಿಗಳ ಹಾಗೂ ಅಧಿಕಾರಗಳ ವಿನಂತಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದ ಅರ್ಹ ಮಕ್ಕಳಿಗೆ ಬೆಳಿಗ್ಗೆ 7.00 ರಿಂದ 7.45, 8.00 ರಿಂದ 8.45 ಹಾಗೂ ಸಂಜೆ 7.00 ರಿಂದ 7.45, 8.00 ರಿಂದ 8.45 ಅವಧಿಯಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಿಕೊಡಲಾಗಿದೆ. ಆದರೆ ತಾಂತ್ರಿಕ ಕಾರಣದಿಂದ ತರಬೇತುದಾರರಿಗೆ ಅವಕಾಶ ಇಲ್ಲವೆಂದು ಸ್ಪಷ್ಟ ಪಡಿಸಿದ್ದೆವು. ಅದಕ್ಕಾಗಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನವರು ನಾವು ಮಾಡುವ ಅಭಿವೃದ್ದೀಯ ಬಗ್ಗೆ ನಕಾರಾತ್ಮಕ ಹೇಳಿಕೆಗಳನ್ನು ಅಧಿಕಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ನೀಡುತ್ತಿದ್ದಾರೆ. ಅವರ ಆರೋಪ ಮುಖ್ಯ ಕೊಳವನ್ನು ಸಾರ್ವಜನಿಕರು ಬಳಸಬಾರದು ಕೇವಲ ಕ್ರೀಡಾಪಟುಗಳಿಗೆ ಕೊಡಬೇಕು ಎಂದು ಹಾಗೂ ಅಭ್ಯಾಸಕೊಳಕ್ಕೆ ಧಕ್ಕೆಯಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಾವು ಮಂಗಳೂರು ಸ್ಮಾರ್ಟ್ ಸಿಟಿಯವರ ಗಮನಕ್ಕೆ ತಂದು ಅಭ್ಯಾಸಕೊಳದ ಆಳವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಟೀಲ್‌ ನಿಂದ ಮಾಡಿದಂತಹ ಟ್ರಾಲಿಯನ್ನು ಈಜುಕೊಳಕ್ಕೆ ಅಳವಡಿಸಿದ್ದೇವೆ. ಇದರಿಂದ ಈಜುಕೊಳದ Structure ಗೆ ಯಾವುದೇ ಅಡಚಣೆಯಾಗುವುದಿಲ್ಲ. ಇದು ಒಂದು ಚಲಿಸುವ ಹಾಗೂ ತೆಗೆಯುವ ಟ್ರಾಲಿಯಾಗಿರುತ್ತದೆ. ಮುಖ್ಯವಾಗಿ ಅಭ್ಯಾಸ ಕೊಳಕ್ಕೆ ಯಾವುದೇ ಒಂದು Fina Rule ಇಲ್ಲ. ಇದರ ಬಗ್ಗೆ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರ ಈಜು ಸಂಸ್ಥೆಗಳು ಕೂಡ 28.02.2024 ರ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಆಳವನ್ನು ಕಡಿಮೆ ಮಾಡಬೇಕೆಂದು ಸಲಹೆ ಸೂಚನೆಗಳನ್ನು ಕೊಟ್ಟಿದ್ದರು. ಅದನ್ನೆಲ್ಲ ಮನದಲ್ಲಿಟ್ಟುಕೊಂಡು ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಲಸವನ್ನು ಕೈಗೊಂಡಿದ್ದೇವೆ ಎಂದರು.

ಅಲ್ಲದೆ ಅವರಿಗೆ ಪ್ರವೇಶ ಶುಲ್ಕ ರೂ.1000 ಪಡೆದುಕೊಂಡಿರುತ್ತೇವೆ. ಆದರೆ ಅವರು ರೂ.3000 ರಿಂದ ರೂ.4000 ದವರೆಗೆ ಪಡೆದಿರುತ್ತೇವೆ ಎಂದು ಸುಳ್ಳು ಮಾಹಿತಿಯನ್ನು ಮೊದಲ ಪತ್ರಿಕೆಗೆ ಹೇಳಿರುತ್ತಾರೆ. ಆದರೆ ಮಂಗಳ ಸ್ವಿಮಿಂಗ್ ಕ್ಲಬ್‌ನವರು ಅವರ ಮಕ್ಕಳಿಗೆ ಎಮ್ಮೆಕೆರೆ ಈಜುಕೊಳದ ತರಬೇತಿ ನೀಡಲು ಈಜುಪಟುಗಳಿಂದ 3 ರಿಂದ 4 ಸಾವಿರವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಅವರದ್ದೆ ಹೆತ್ತವರು ಹೇಳುತ್ತಿದ್ದರು ಎಂದರು.

ಚಿಂತನ್ ಶೆಟ್ಟಿ ಎನ್ನುವ ಈಜುಪಟುವನ್ನು ಹೊರಗೆ ಹಾಕಿದ್ದೇವೆ ಎಂದು 2ನೇ ಪತ್ರಿಕೆಯಲ್ಲಿ ಹೇಳಿರುತ್ತಾರೆ. ಆದರೆ ಚಿಂತನ್ ಶೆಟ್ಟಿಯರು ಆ ಮೊದಲೇ High Performance ತರಬೇತಿಗಾಗಿ ಬೆಂಗಳೂರಿನ ಲಕ್ಷನ್ ಈಜು ಸಂಸ್ಥೆಗೆ ಸೇರಿರುತ್ತಾರೆ. 3ನೇ ಪತ್ರಿಕೆಯಲ್ಲಿ 38 ರಾಜ್ಯ ರಾಷ್ಟ್ರ ಮಟ್ಟದ ಈಜುಪಟುಗಳನ್ನು ಹೊರಗೆ ಹಾಕಿದ್ದೇವೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಅದರಲ್ಲಿ 14 ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ, 6 ಜೈ ಹಿಂದ್ ಕ್ಲಬ್‌ನ, 11 ಪುತ್ತೂರು ಆಕ್ವಾಟಿಕ್ ಕ್ಲಬ್‌ನ ಹಾಗೂ ಉಳಿದ ವಿ ಒನ್ ಆಕ್ವಾ ಸೆಂಟರ್ನ ಮಕ್ಕಳ ಹೆಸರನ್ನು ಕೊಟ್ಟಿದ್ದರು. ಆದರೆ ಎಮ್ಮೆಕೆರೆ ಈಜುಕೊಳಕ್ಕೆ ಈ ಹೆಸರುಗಳಲ್ಲ ಕೇವಲ 14 ಮಕ್ಕಳು ಮಾತ್ರ ಬರುತ್ತಿದ್ದು ಆದರಲ್ಲಿ ಕೇವಲ 9 ಮಕ್ಕಳು ಮಾತ್ರ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ಮಕ್ಕಳಾಗಿರುತ್ತಾರೆ. ಇದರ ಪ್ರಕಾರ ಮಾಚ್ ನಿಂದ ಇಲ್ಲಿಯವರೆಗೆ ನಮ್ಮ ಕೆಲಸ ಕಾರ್ಯಗಳಿಗೆ ಅಪ ಪ್ರಚಾರ ಮಾಡಿಕೊಂಡು ನಮ್ಮ ಸಂಸ್ಥೆಯ ಹಾಗೂ ನಮ್ಮ ಜಿಲ್ಲೆಯ ಹೆಸರನ್ನು ಹಾಳು ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಕ್ರೋಶ ಹೊರಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೈಹಿಂದ್ ಕ್ಲಬ್ ನ ಹೆಡ್ ಕೋಚ್ ರಾಮಕೃಷ್ಣ,, ಲೋಕರಾಜ್ ವಿ.ಎಸ್ ಹೆಡ್ ಕೋಚ್, ಡಾ.ನಾಗೇಂದ್ರ, ರೂಪ .ಜಿ.ಪ್ರಭು, ಹಾಗೂ ಐವಿ ಯವರು ಉಪಸ್ಥಿತರಿದ್ದರು .

 

error: Content is protected !!