ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ 2 ನೇ ವರ್ಷಾಚರಣೆ ಬೆನ್ನಲ್ಲೇ ಮಂದಿರದ ಮೊದಲಬನೇ ಮಹಡಿಯಲ್ಲಿ ‘ರಾಜಾ ರಾಮ ದರ್ಬಾರ್’ ಆರಂಭವಾಗಿದೆ.
ರಾಮ ಮಂದಿರ ಸಮುಚ್ಛಯದ 1 ನೇ ಮಹಡಿಯಲ್ಲಿ ಸ್ಥಾಪಿಸಲಾಗಿರುವ ರಾಮ ದರ್ಬಾರ್ ಸೇರಿದಂತೆ ಎಂಟು ನೂತನ ದೇವಾಲಯಗಳನ್ನು ನಿರ್ಮಿಸಲಾಗಿದ್ದು, ಅಲ್ಲಿನ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾಪನೆಯು ‘ಗಂಗಾ ದಸರಾ’ ಕಾರ್ಯಕ್ರಮದೊಂದಿಗೆ ನಿನ್ನೆ ನೆರವೇರಿದೆ.
ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿದ್ದರು. ‘ರಾಜಾರಾಮ ದರ್ಬಾರ್’ ನಲ್ಲಿ ರಾಮ ಮತ್ತು ಸೀತೆ ಸಿಂಹಾಸೀನರಾಗಿರುವ ವಿಗ್ರಹಗಳಿವೆ. ಜತೆಗೆ ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮಾತ್ರವಲ್ಲದೆ ಹನುಮಂತನ ವಿಗ್ರಹಗಳಿವೆ. ಮಂದಿರದ ಇನ್ನುಳಿದ ದೇವಾಲಯಗಳಲ್ಲಿ ಅನ್ನಪೂರ್ಣೆ, ಗಣೇಶ, ಶಿವ, ಸೂರ್ಯ, ಶೇಷಾವತಾರ, ಭಗವತಿ ಹಾಗೂ ಇನ್ನಿತರ ದೇವ- ದೇವತೆಗಳ ವಿಗ್ರಹಗಳಿವೆ. ಶಿವ ಲಿಂಗವನ್ನೂ ಪ್ರತಿಷ್ಠಾಪಿಸಲಾಗಿದೆ.
ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ಟಸ್ಟ್ನ ಮುಖ್ಯಸ್ಥರಾದ ಚಂಪತ್ ರಾಯ್ ಮತ್ತು ಡಾ. ಅನಿಲ್ ಮಿಶ್ರಾ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.