ಶಾಂತಿಗಾಗಿ ಆ್ಯಂಟಿ ಕಮ್ಯೂನಲ್‌ ಫೋರ್ಸನ್ನು ಜನರು ಸ್ವಾಗತಿಸಬೇಕು: ರಮಾನಾಥ ರೈ


ಮಂಗಳೂರು: ಪಿತೂರಿ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಕೋಮು ಗಲಭೆ ಶಾಶ್ವತವಾಗಿ ನಿಂತುಹೋಗುತ್ತದೆ. ನಮ್ಮ ಸರ್ಕಾರ ಆಂಟಿ ಕಮ್ಯೂನಲ್‌ ಫೋರ್ಸ್‌ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಶಾಂತಿಗಾಗಿ ಸರ್ಕಾರದ ವತಿಯಿಂದ ಸರ್ವ ಪ್ರಯತ್ನ ಆಗುತ್ತಿದೆ. ಹಾಗಾಗಿ ಈ ಪೋರ್ಸನ್ನು ಜಿಲ್ಲೆಯ ಜನ ಸ್ವಾಗತಿಸಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ರಾಮಾನಾಥ ರೈ ಹೇಳಿದರು.
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಬಯಸದ ಜನರು ಆಂಟಿ ಕಮ್ಯೂನಲ್‌ ಫೋರ್ಸ್‌ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಈ ಫೋರ್ಸ್‌ ಅನ್ನು ಒಂದು ವರ್ಗದ ಜನರನ್ನು ದೃಷ್ಟಿಯಲ್ಲಿರಿಸಿ ಮಾಡಲಾಗಿದ್ದು, ಅವರಿಗೆ ಇದರ ಮೂಲಕ ಕಿರುಕುಳ ನೀಡುವ ಉದ್ದೇಶವಿದೆ ಎಂದು ಹೇಳ್ತಾ ಇದ್ದಾರೆ. ಆದರೆ ಶಾಂತಿ ಬಯಸುವ ಪ್ರತಿಯೊಬ್ಬರಿಗೂ ಶಾಶ್ವತ ಶಾಂತಿಗೆ ಇದು ಸಹಾಯ ಆಗುತ್ತದೆ. ಕಾಂಗ್ರೆಸ್‌ ವತಿಯಿಂದ ಇದಕ್ಕೆ ಸ್ವಾಗತ. ಇದಕ್ಕೆ ಅಧಿಕಾರಿ ಯಾರಾಗ್ಬೇಕು ಎಂದು ಆದೇಶವಾಗಿದೆ. ಎಲ್ಲಾ ಸಮುದಾಯದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವ್ಯಕ್ತಿ ಈ ಪೋರ್ಸ್‌ನಲ್ಲಿರಬೇಕು ಎಂದು ರೈ ಹೇಳಿದರು.

ನಾನು ಈ ಜಿಲ್ಲೆಯಲ್ಲಿ 2 ಬಾರಿ ಉಸ್ತುವಾರಿ ಆಗಿದ್ದೆ. ಮತೀಯ ಘರ್ಷಣೆಗಳಾದಾಗ ಶಾಂತಿ ಸಭೆ ಕರೆದಿದ್ದೆ. ಆದರೆ ಕೆಲವು ಸಂಘಟನೆಗಳು ಬರ್ತಿರಲಿಲ್ಲ. ಯಾಕೆಂದರೆ ಅವರಿಗೆ ಶಾಂತಿ ಬೇಕಿಲ್ಲ. ಗಲಾಟೆ, ರಾಜಕೀಯ ಬೇಳೆ ಬೇಯಿಸಲು ಮಾತ್ರ ಬೇಕು. ಯಾರು ಕೋಮುವಾದಿಗಳು ಎಂದು ಅಂಗೈ ಹುಣ್ಣಿಗೆ ಕಣ್ಣಿಗೆ ಬೇಕಿಲ್ಲ. ಕೋಮು ಪ್ರಚೋದನೆ ಮಾಡುವವರು ಯಾರೆಂದು ಜನರಿಗೆ ಗೊತ್ತಾಗಿದೆ ಎಂದರಿ.
ಅಧಿಕಾರಿ ಬದಲಾದ ಮೇಲೆ ವಾಟ್ಸ್ಯಾಪ್‌ನಲ್ಲಿ ಬರೆಯವುದು ಕೂಡಾ ಕಡಿಮೆಯಾಗಿದೆ. ಬಂಟ್ವಾಳದಲ್ಲಿ ಹತ್ಯೆಗೀಡಾದ ರಹಿಮಾನ್‌ ಅಮಾಯಕನಾಗಿದ್ದು, ಅವನು ಯಾವುದೇ ಸಂಘಟನೆಗಳಲ್ಲಿರಲಿಲ್ಲ. ಈತನ ಹತ್ಯೆಗೆ ಕೋಮು ಪ್ರಚೋದನೆಯೇ ಕಾರಣ. ಪೊಲೀಸರು ಅದಕ್ಕಾಗಿ ಕ್ರಮ ತೆಗೆದುಕೊಳ್ಳುತ್ತಿದ್ದು, ಆದರೆ ಪೊಲೀಸ್‌ ಧೈರ್ಯ ಕುಗ್ಗಿಸುವ ಕೆಲಸ ಆಗ್ತಾ ಇದೆ ಎಂದು ಆಪಾದಿಸಿದರು.
ಜಿಲ್ಲೆಯಲ್ಲಿ ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಜನಾಂಗೀಯ ಘರ್ಷಣೆ ಆಗ್ಬಹುದು. ನಮ್ಮ ಜಿಲ್ಲೆಯಲ್ಲಿ ಬೋಸ್ನಿಯಾದಂತೆ ಮತೀಯ ಸಂಘರ್ಷ ಆಗ್ಬಾರದು. ಬೋಸ್ನಿಯಾ ಗಲಭೆ ನಿಯಂತ್ರಿಸಲು ಹೊರದೇಶಗಳಿಂದ ಪೊಲೀಸ್‌ ಕರೆಸ್ತಾ ಉದ್ದಾರೆ. ನಮ್ಮವರೇ ಆದ ಸಂಜೀವ ನಾಯಕ್‌ ಕೂಡಾ ಅಲ್ಲಿಗೆ ಹೋಗಿದ್ದಾರೆ. ನಮ್ಮಲ್ಲಿ ಅಂತಾ ಪರಿಸಸ್ಥಿತಿ ಆಗ್ಬಾರದು. ಮಂಗಳೂರು ಮತ್ತೊಂದು ಮಣಿಪುರ ಆಗ್ಬಾರ್ದು. ಪೊಲೀಸರು ನಿರ್ದಾಕ್ಷಿಣ್ಯ, ಹಾಗೂ ಸ್ವತಂತ್ರವಾಗಿ ಕೆಲಸ ಮಾಡುವಂತೆ ಅವಕಾಶ ಕಲ್ಪಿಸಿದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಈ ಬಾರಿ ಶಾಂತಿ ಸಭೆ ಯಾಕೆ ಕರೆದಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೈ, ನಾನು ಉಸ್ತುವಾರಿ ಆಗಿದ್ದಾಗ ಅವರು ಶಾಂತಿ ಸಭೆಗೆ ಬರ್ತಾ ಇರಲ್ಲಿಲ್ಲ. ಶಾಂತಿ ಸಭೆ ಬೇಕಿದ್ದರೆ ಜಿಲ್ಲಾಧಿಕಾರಿಯವರಲ್ಲಿ ಹೇಳಲಿ ಆಗ ಅವರು ಕರೀತಾರೆ. ಅಂದು ಶಾಂತಿ ಸಭೆಗೆ ಬಾರದಿರುವವರು ಇಂದು ಶಾಂತಿಸಭೆ ಬೇಕು ಎಂದು ಯಾಕೆ ಕೇಳ್ತಾ ಇದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ನುಡಿದರು.

ಹೊಸ ಕಮೀಷನರ್‌ ಆರು ತಿಂಗಳಲ್ಲೇ ವರ್ಗ ಆಗ್ಬಹುದಾ?
ನೂತನ ಕಮೀಷನರ್‌ ಆಗಿ ಬಂದಿರುವ ಸುಧೀರ್‌ ರೆಡ್ಡಿ ಕೆಲವು ವರ್ಷಗಳ ಹಿಂದೆ ದ.ಕ ಜಿಲ್ಲೆಯಲ್ಲಿ ಎಸ್‌ಪಿ ಆಗಿದ್ದರು. ಆದರೆ ಆಗ ಅವರು ಆರೇ ತಿಂಗಳಲ್ಲಿ ವರ್ಗ ಆಗಿದ್ದರು. ಇದನ್ನು ದೃಷ್ಟಿಯಲ್ಲಿರಿಸಿ ಪತ್ರಕರ್ತರು ಹೊಸ ಕಮೀಷನರ್‌ ಆರು ತಿಂಗಳಲ್ಲೇ ವರ್ಗ ಆಗ್ಬಹುದಾ ಎಂದು ಪ್ರಶ್ನಿಸಿದಾಗ ಉತ್ತರಿಸಿದ ರೈ, ವರ್ಗಾವಣೆ ಸಹಜ ಪ್ರಕ್ರಿಯೆ. ಈ ಬಾರಿಯೂ ಆರೇ ತಿಂಗಳಲ್ಲಿ ಆಗ್ತಾರಾ? ಇಲ್ಲಾ ಎಂದು ಕಾದು ನೋಡುವ ಎಂದುತ್ತರಿಸಿದರು. ಕೋಮು ಗಲಭೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ಸೂಚಿಸುವವರು, ಅದೇ ಪೊಲೀಸರು ಮರಳು, ಜೂಜಿಗೆ ಕೈ ಹಾಕಿದ್ರೆ ವರ್ಗಾವಣೆ ಆಗ್ತಾರಲ್ಲಾ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರೈ ನೀವು ಅದನ್ನು ಅವರಲ್ಲೇ ಕೇಳಿ, ನನ್ನಲ್ಲಿ ಮರಳು, ಮಣ್ಣು, ಕಲ್ಲು ವ್ಯಾಪಾರ ಇಲ್ಲ. ಅಬಕಾರಿ ಮಂತ್ರಿಯಾಗಿದ್ದರೂ ವೈನ್‌ ಶಾಪ್‌ ಇಲ್ಲ. ಸಾರಿಗೆ ಮಂತ್ರಿಯಾಗಿದ್ದರೂ ನಾನೊಂದು ಬಸ್‌ ಮಾಡಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಲವರಿದ್ದರು.

 

Fro Video Click Here:

error: Content is protected !!