ಶೋಭಾ ಕರಂದ್ಲಾಜೆಯವರೇ ನಿಮಗೆ ಸಚಿವ ಸ್ಥಾನ ಯಾಕೆ ಬೇಕು, ರಾಜೀನಾಮೆ ಕೊಡಿ: ಮಮತಾ ಗಟ್ಟಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸೌದಿ ಅರೇಬಿಯಾ, ದುಬೈನಿಂದ ಹವಾಲ ಹಣ ಬರ್ತಾ ಇದ್ದು, ಅದು ಯು.ಟಿ. ಖಾದರ್‌ ಕ್ಷೇತ್ರದ ಬಾರ್ಡರ್‌ ನಿಂದ ಸಾಗಿ ಕಾಸರಗೋಡಿನ ಮೂಲಕ ಕೇರಳಕ್ಕೆ ಹೋಗ್ತಾ ಇದೆ ಎನ್ನುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಒಬ್ಬ ಕೇಂದ್ರ ಸಚಿವೆಯಾಗಿ ನಿಮಗೆ ಎಫ್‌ಇಎಂಎ(ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ) 2000, ಅಕ್ರಮ ವರ್ಗಾವಣೆ ತಡೆ ಕಾನೂನು ಇದ್ದು ಅದನ್ನು ಇ.ಡಿ ನೋಡಿಕೊಳ್ಳುತ್ತದೆ ಎಂದು ಗೊತ್ತಿಲ್ವಾ? ಕೇಂದ್ರ ಕೇಂದ್ರದ ಅಧೀನದಲ್ಲಿರುವ ಬರುವ ಇ.ಡಿ ಸಂಸ್ಥೆ ಕೇಂದ್ರದ್ದೇ ಆಗಿರುವಾಗ ಹವಲಾದಾರರನ್ನು ಹಿಡಿಯಬಹುದಲ್ವಾ? ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು  ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ. ನಿಮಗೆ ಆ ಸಚಿವ ಸ್ಥಾನ ಯಕೆ ಬೇಕು ಎಂದು ರಾಜ್ಯ ಗೇರು‌ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪ್ರಶ್ನಿಸಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯತ್ತ ಸಾಗುತ್ತಿದ್ದು, ನಾಯಕರು, ಅಧಿಕಾರಿಗಳು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಪ್ರಕೃತಿ ವಿಕೋಪದ ಸಮಯ ಜಾತಿ, ಧರ್ಮ ಬಿಟ್ಟು ಒಟ್ಟಾಗಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿ ಮಾಡಿ ನೀಡಿರುವ ಹೇಳಿಕೆ ಬಾಲಿಷತನವಾಗಿದ್ದು, ಅವರು ತನ್ನ ಘನತೆಯನ್ನು ಕಳೆದುಕೊಂಡಿದ್ದು, ಈ ಮೂಲಕ ಶಾಂತಿ ಬಯಸುವ ನಾಗರಿಕರ ಮನ ನೋಯಿಸಿದ್ದಾರೆ. ಜಿಲ್ಲೆಯ ಅಶಾಂತಿಗೆ ಯಾರು ಕಾರಣ ಎಂದು ಅವರಿಗೆ ಅರಿವಿದ್ದರೂ ಕೂಡಾ ರಾಜಕೀಯ ಕಾರಣಕ್ಕಾಗಿ ಅದನ್ನು  ಹೇಳದೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮೇಲೆ ಗೂಬೆ ಕೂರಿಸಿದ್ದಾರೆ. ಅವರ ಆರೋಪ ನಾವು  ಅಲ್ಲಗಳೆಯುತ್ತಿದ್ದೇವೆ. ಅವರ ಮಾತುಗಳು ಪ್ರಚೋದನಾತ್ಮಕವಾಗಿದ್ದು, ಜಿಲ್ಲೆಯ ಶಾಂತಿಯನ್ನು ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಮತಾ ಗಟ್ಟಿ ಆರೋಪಿಸಿದರು.

ನಾನು ಪುತ್ತೂರಿನಲ್ಲಿ ಹುಟ್ಟಿದವಳು, ನಾನು ಇಲ್ಲಿ ಸಣ್ಣದಿರುವಾಗಿನಿಂದ ಕೋಮು ಗಲಭೆ ಆಗುತ್ತಿದೆ ಎನ್ನುವ ಕರಂದ್ಲಾಜೆಯವರೇ ನೀವು ಈಗ ಇಷ್ಟು ದೊಡ್ಡ ಹುದ್ದೆಯಲ್ಲಿದ್ದೀರಿ. ನಿಮಗೆ ಸಾಕಷ್ಟು ಅವಕಾಶಗಳಿತ್ತು. ನಿಮ್ಮದೇ ಸರ್ಕಾರ ರಾಜ್ಯ, ಕೇಂದ್ರಲ್ಲಿದ್ದಾಗ ಕೋಮು ಗಲಭೆ ನಿಲ್ಲಿಸುವ ಪ್ರಯತ್ನ ವನ್ನು   ಮಾಡಿಲ್ಲ ಯಾಕೆ? ಈಗ  ನೀವು ಸಂತೋಷದಲ್ಲಿದ್ದೀರಿ ನಿಜ, ಆದರೆ ಬಡವರ ಮಕ್ಕಳನ್ನು ಯಾಕೆ ಪ್ರಚೋದನಕಾರಿಯಾಗಿ ಮಾತಾಡಿ ಪ್ರಚೋದಿಸುತ್ತಿರಿ? ನಾನು ಸುಹಾಸ್‌ ಶೆಟ್ಟಿ ಹತ್ಯೆಯಾದಾಗ ಭಾಷಣ ಮಾಡಿದ್ದೀನಿ, ತಾಖತ್ತಿದ್ದರೆ ನನ್ನ ಮೇಲೂ ಕೇಸ್‌ ಹಾಕಿ ಎಂದು ಸವಾಲೊಡ್ಡವ ನೀವು ಸಂವಿಧಾನಕ್ಕೆ ಗೌರವ ಕೊಟ್ಟು ಯಾಕೆ  ಮಾತಾಡುತ್ತಿಲ್ಲ? ಎಂದು ಮಮತಾ ಗಟ್ಟಿ ಪ್ರಶ್ನಿಸಿದರು.


ಉಸ್ತುವಾರಿ ದಿನೇಶ್‌ ಗುಂಡೂರಾವ್‌ ನಾಲಾಯಕ್‌ ಸಚಿವ ಎಂದಿರುವ ಶೋಭಾ ಅವರೇ ಗುಂಡೂರಾವ್‌ ಪ್ರತಿ ಸಂದರ್ಭದಲ್ಲೂ ಜಿಲ್ಲೆಗೆ ಬರುತ್ತಿದ್ದಾರೆ. ಬೇರೆ ಜಿಲ್ಲೆಯವರಾದರೂ ಕೂಎಅ ಅವರು ಇಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ನೆನಪಿರಲಿ. ಗ್ಯಾರಂಟಿ ಯೋಜನೆಗಳು ಸುಳ್ಳು ಎಂದು ಹೇಳುವ ತಾವು, ನಿಮ್ಮ ಚಾರ್ವಾಕ ಗ್ರಾಮದಲ್ಲಿ ಸರ್ವೆ ಮಾಡಿಸಿ ಪಂಚ ಗ್ಯಾರಂಟಿ ಎಷ್ಟು ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸರ್ವೆ ಮಾಡಿಸಿ. ಈಗ ನಿಮ್ಮಲ್ಲಿ ದುಡ್ಡಾಗಿರಬಹುದು, ಆದರೆ ಬಡವರ ಪರ ಸರ್ಕಾರ ಕಾಳಜಿ ವಹಿಸುತ್ತಿರುವಾಗ ನೀವು ಅದನ್ನು ಸ್ವಾಗತಿಸಬೇಕು. ಹಾಗಾದರೆ ನೀವು ಬೇರೆ ರಾಜ್ಯಗಳಲ್ಲಿ ಚುನಾವಣೆ ಬಂದಾಗ ಯಾಕೆ ಅದು ಕೊಡ್ತೇವೆ ಇದು ಕೊಡ್ತೇವೆ ಅಂತ ಆಶ್ವಾಸನೆ ಕೊಡ್ತೀರಿ? ಎಂದು ಪ್ರಶ್ನಿಸಿದರು.

 

ನೀವು ನಿಜವಾಗಿ ಈ ಜಿಲ್ಲೆಯ ಮಗಳಾಗಿದ್ದರೆ ಜನರಿಗೆ ವಿಶ್ವಾಸದ ಮಾತು ಆಡಬೇಕು. ಆದರೆ ನಿಮ್ಮ ಮಾತುಗಳಿಂದ ಜನ ಸಮುದಾಯಕ್ಕೆ ನೋವು ತಂದಿದೆ. ಪ್ರಕೃತಿ ವಿಕೋಪ ಆಗಿ ಮಕ್ಕಳು ದುರಂತ ಅಂತ್ಯ ಕಂಡಾಗ ಹೆಲಿಕಾಪ್ಟರ್‌ನಲ್ಲೇ ಬಂದು ಪರಿಹಾರ ಕೊಡುವ ಅವಕಾಶವಿದ್ದರೂ ನೀವು ಯಾಕೆ ಬಂದಿಲ್ಲ ಎಂದು ಹರಿಹಾಯ್ದರು.

ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಗ್ಯಾರಂಟಿ ಸಮಿತಿಯ ಜಿಲ್ಲಾ ಶಾಂತಲ ಗಟ್ಟಿ, ಚಂದ್ರಕಲಾ ಜೋಗಿ, ಮಂಗಳೂರು ಉತ್ತರ ಅಧ್ಯಕ್ಷ ರೂಪಾ ಚೇತನ್‌ ಮತ್ತಿತರರಿದ್ದರು.

error: Content is protected !!