ಮಂಗಳೂರು: ಮೊನ್ನೆ ರಹೀಂ ಕೊಲೆಯಾದ ಸಂದರ್ಭ ಸಚಿವ ದಿನೇಶ್ ಗುಂಡೂರಾವ್ ಭಗವದ್ಗೀತೆಯಲ್ಲಿ ಇದನ್ನು ಕಲಿಸ್ತಾರ ಅಂತ ಪ್ರಶ್ನೆ ಮಾಡಿದ್ದಾರೆ. ಭಗವದ್ಗೀತೆ ಓದಿದವರೇ ಈ ಕೃತ್ಯ ಮಾಡಿದ್ದಾರೆ ಎಂಬ ದೃಷ್ಟಿಕೋನ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಹಾಗಾದರೆ ಹಿಂದೂಗಳ ಹತ್ಯೆಯಾದಾಗ ನಿಮ್ಮ ಮುಸಲ್ಮಾನರ ಹತ್ತಿರ ನಿಮ್ಮ ಕುರಾನ್ ಆ ರೀತಿ ಹೇಳ್ತದಾ ಅಂತ ಯಾಕೆ ಪ್ರಶ್ನೆ ಮಾಡುವುದಿಲ್ಲ. ಹಾಗೆ ಪ್ರಶ್ನಿಸಬೇಕೆಂದು ನಾನು ಹೇಳುವುದೂ ಇಲ್ಲ ಹೇಳಲೂ ಬಾರದು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಮುಸ್ಲಿಮರ ಏನು ಮಾಡಿದ್ರೂ ತಪ್ಪು ಎಲ್ಲದಕ್ಕೂ ಹಿಂದೂಗಳೆ ಹೊಣೆ ಎನ್ನುವಂತೆ ಮಾತಾಡುತ್ತಾರೆ. ಪೊಲೀಸ್ ತನಿಖೆಯ ಮೇಲೆ ಹಸ್ತಕ್ಷೇಪ ಮಾಡುತ್ತಾರೆ. ಸಮಸ್ಯೆ ಕುತ್ತಿಗೆ ಬಂದಾಗ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾರೆ. ನಮ್ಮ ಜಿಲ್ಲೆಗೆ ಹೊಸ ಕಮೀಷನರ್ ಹಾಗೂ ಹೊಸ ಎಸ್ಪಿಯನ್ನು ತಂದಿದ್ದಾರೆ. ಇನ್ನಾದರೂ ಇಲ್ಲಿನ ಕಾನೂನು ವ್ಯವಸ್ಥೆ ಸರಿಯಾಗಲಿ. ದಕ್ಷ ಅಧಿಕಾರಿಗಳೆಂದು ಹೆಸರು ಪಡೆದ ಅವರು ಸರ್ಕಾರದ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಲಿ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಅಂತ ಬೆಂಗಳೂರಿನಲ್ಲಿ ಕೂತ ರಾಜಕೀಯ ನಾಯಕರು ಹೇಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ದಕ ಜಿಲ್ಲೆಯನ್ನು ನಿರ್ಲಕ್ಷ ಮಾಡಿದ್ದಾರೆ. ದಿನೇಶ್ ಗುಂಡೂರಾವ್, ಹೋಂ ಮಿನಿಸ್ಟರ್, ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಇವರ ಮುಸ್ಲಿಂ ತುಷ್ಟೀಕರಣ ಜಾಸ್ತಿಯಾಗುತ್ತಿದೆ. ಯಾವುದೇ ಘಟನೆ ಆದರೂ ಸಹ ಅದಕ್ಕೆ ಬಿಜೆಪಿ, ಸಂಘಪರಿವಾರ ಕಾರಣ ಅಂತ ಹೇಳುವುದನ್ನು ರೂಢಿ ಮಾಡಿದ್ದಾರೆ. ಅವರ ಕರ್ತವ್ಯ ಮರೆತಿದ್ದಾರೆ ಎಂದು ಆರೋಪಿಸಿದರು.
ಮಳೆಯ ಸನ್ನಿವೇಶ, ಕೊಲೆಯಂತ ವಿಷಯಗಳ ಕುರಿತು ಶಾಸಕರನ್ನು ಕರೆದು ಒಂದೇ ಒಂದು ಮೀಟಿಂಗ್ ಮಾಡಿಲ್ಲ. ಜಿಲ್ಲಾ ಮಂತ್ರಿಗಳ ವತಿಯಿಂದಲೂ ಆಗಿಲ್ಲ. ಗೃಹ ಸಚಿವರಿಗೂ ಈ ಅವಕಾಶ ಇತ್ತು. ಆದರೆ ಕಾಂಗ್ರೆಸ್ ಮುಸ್ಲಿಂ ಮುಖಂಡರನ್ನು ಕರೆದು ಮಾತ್ರ ಮೀಟಿಂಗ್ ಮಾಡಿದ್ದಾರೆ. ಹಿಂದೂ ಸಂಘಟನೆಗಳ ಮುಖ್ಯಸ್ಥರು, ಸಂಘಸಂಸ್ಥೆಗಳ ಮುಖಂಡರನ್ನು ಕರೆದು ಯಾಕೆ ಮೀಟಿಂಗ್ ಮಾಡಿಲ್ಲ. ಮುಸ್ಲಿಂ ಮುಖಂಡರನ್ನು ಮಾತ್ರ ಕರೆದು ಸಭೆ ಮಾಡಿದ್ರೆ ಅದು ಶಾಂತಿ ಸಭೆ ಆಗುತ್ತಾ? ಮುಸ್ಲಿಂ ತುಷ್ಟೀಕರಣ ಎಲ್ಲೆ ಮೀರಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಗೋ ಹತ್ಯೆ, ಅಕ್ರಮ ಗೋ ಸಾಗಣೆ ನಿಲ್ಲಬೇಕು. ಲವ್ ಜಿಹಾದ್ ಕೂಡಾ ನಿಲ್ಲಬೇಕು. ಇದಕ್ಕೆ ಪರಿಹಾರ ಕೊಡುವುದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕರ್ತವ್ಯ. ಗ್ಯಾರಂಟಿ ಬಿಟ್ರೆ ಜಿಲ್ಲೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.
ಸುಹಾಸ್ ಶೆಟ್ಟಿ ಮನೆಗೆ ಕಾಂಗ್ರೆಸ್ನಲ್ಲಿರುವ ಮುಸ್ಲಿಂ ಮುಖಂಡರು ಹೋಗಬಾರದು ಎಂದು ಯಾಕೆ ಹೇಳ್ತಾರೆ ಎಂದು ನಮಗೆ ಅರ್ಥವಾಗುವುದಿಲ್ಲ. ಇವರಿಗೇನೂ ಅಂಡರ್ಲೈನ್ ಕನೆಕ್ಷನ್ ಇದೆಯಾ? ಇಲ್ಲಿರುವ ನಂಬರ್ ಟು ಬಿಸ್ನೆಸ್ ಇಮಿಡಿಯಟ್ ನಿಲ್ಲಿಸದಿದ್ದರೆ ಶಾಂತಿ ಇಲ್ಲಿ ಶಾಂತಿ ನೆಲಸು ವುದಿಲ್ಲ ಎಂದು ಭರತ್ ಶೆಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಉಳ್ಳಾಲದ ದೇರ್ಲಕಟ್ಟೆಯಲ್ಲಿ ಒಂದು ಮಗು ಹಾಗೂ ಕೊಣಾಜೆ ಮಂಜನಾಡಿಯ ಮೊಂಟೆಪದವು ಎಂಬಲ್ಲಿ ಮೂವರು ಮೃತಪಟ್ಟಿದ್ದಾರೆ ಅವರಿಗೆ ಸರ್ಕಾರ ಗರಿಷ್ಠ ಮಟ್ಟದ ಪರಿಹಾರ ಕೊಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಮಳೆಯ ಹಾನಿಯ ಕುರಿತಂತೆ ಅಧಿಕಾರಿಗಳ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಲೇ ಜಿಲ್ಲೆಯಲ್ಲಿ ಮಳೆ ಹಾನಿ ಹೆಚ್ಚಲು ಕಾರಣವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ, ಮುಖಂಡರಾದ ಯತೀಶ್ ಅರ್ಲ, ಪ್ರೇಮಾನಂದ ಶೆಟ್ಟಿ, ಸಂಜೀವ ಪ್ರಭು, ರಾಜ್ ಗೋಪಾಲ್ ರೈ, ಅರುಣ್ ಜಿ. ಶೇಟ್, ಸತೀಶ್, ಡೊಬಯ ಅರಳ, ಮನೋಜ್ ಮತ್ತಿತರರು ಇದ್ದರು.
For Video Click Here;