ತೋಟಬೆಂಗ್ರೆ: ನಾಡದೋಣಿ ಮಗುಚಿ ಇಬ್ಬರು ನೀರುಪಾಲು

ಮಂಗಳೂರು: ತೋಟಬೆಂಗ್ರೆ ಅಳಿವೆ ಬಾಗಿಲು ನಾಡದೋಣಿ ಮಗುಚಿ ಇಬ್ಬರು ನೀರುಪಾಲಾದ ಘಟನೆ ಇದೀಗ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಯಶವಂತ ಹಾಗೂ ಕಮಲಾಕ್ಷ ಮೃತ ದುರ್ದೈವಿಗಳು.

 

ಯಶವಂತ ಹಾಗೂ ಕಮಲಾಕ್ಷ   ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ನಾಡದೋಣಿಯ ಮೂಲಕ  ಮೀನು ಹಿಡಿಯುತ್ತಿದ್ದರು. ಆಗ ಬೀಸಿದ ರಭಸದ ಮಳೆ ಗಾಳಿಯ ಅಬ್ಬರಕ್ಕೆ ದೋಣಿಯ ಮಗುಚಿದ್ದು, ದೋಣಿಯಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೇ ಸಮೀಪ ದಡಕ್ಕೆ ಬಂದು ಬಿದ್ದಿದೆ. ನಾಪತ್ತೆಯಾದವರಿಗಾಗಿ ಸಾಕಷ್ಟು ಶೋಧ ನಡೆಸಲಾಗುತ್ತಿದ್ದು, ಮಳೆಯಿಂದಾಗಿ ಕಾರ್ಯಾಚರಣೆ ನಡೆಸಲು ತೊಂದರೆಯಾಗುತ್ತಿದೆ. ಚಂಡಮಾರುತದ  ಭೀತಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಾಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಎಚ್ಚರಿಕೆಯನ್ನು ಮೀನುಗಾರರು ನಿರ್ಲಕ್ಷಿಸಿ ಅಪಾಯವನ್ನು ಮೈಗೆಳೆದುಕೊಳ್ಳುತ್ತಿದ್ದಾರೆ.

error: Content is protected !!