ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿ, ದ.ಕ.ಎಸ್ಪಿಯಾಗಿ ಅರುಣ್ ಕೆ. ?

ಮಂಗಳೂರು: ಕಳೆದೊಂದು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿ ಮತ್ತು ಮಂಗಳೂರು ಸುತ್ತಮುತ್ತ ನಡೆದಿರುವ ಕೋಮು ದ್ವೇಷ ಹಿನ್ನೆಲೆಯ ಮೂರು ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳ ಹಿನ್ನೆಲೆಯಲ್ಲಿ ಜನರು ರಾಜ್ಯ ಸರಕಾರ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಲು ಗೃಹ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಮಂಗಳೂರು ಪೊಲೀಸ್ ಕಮಿಷನರ್ ಆಗಿ ಹಿಂದೆ ಮಂಗಳೂರಲ್ಲಿ ಎಸ್ಪಿ ಆಗಿದ್ದು ಬಳಿಕ ವರ್ಗಾವಣೆಗೊಂಡಿದ್ದ ಖಡಕ್ ಅಧಿಕಾರಿ ಸುಧೀರ್ ರೆಡ್ಡಿ ಅವರನ್ನು ಹಾಗೂ ಈಗಿನ ಉಡುಪಿ ಎಸ್ಪಿ ಅರುಣ್ ಕೆ. ಅವರನ್ನು ಜಿಲ್ಲಾ ಎಸ್ಪಿಯನ್ನಾಗಿ ನೇಮಿಸಲು ಮನಸು ಮಾಡಿದೆ ಎಂದು ತಿಳಿದುಬಂದಿದೆ.


ಸುಧೀರ್ ರೆಡ್ಡಿ ಅವರು ಹಿಂದೆ ಮಂಗಳೂರಲ್ಲಿದ್ದ ವೇಳೆ ಕರ್ತವ್ಯ ನಿಷ್ಠೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಅವರನ್ನು ಅದೇ ಕಾರಣಕ್ಕೆ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಈಗ ಅವರನ್ನೇ ಮಂಗಳೂರಿಗೆ ಕರೆತಂದು ಕೋಮು ದ್ವೇಷ, ಘರ್ಷಣೆಗೆ ಫುಲ್ ಸ್ಟಾಪ್ ಹಾಕಲು ಸರಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

error: Content is protected !!