ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಹತ್ಯೆ ನಡೆದಿದೆ. ದುಡಿದು ತಿನ್ನುವ ಅಮಾಯಕ ಯುವಕ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಕೋಮುಪ್ರಚೋದನೆ ಭಾಷಣಗಳು ನಡೆಯುತ್ತಿದ್ದರೂ ಸರ್ಕಾರದ ಮೌನವಾಗಿ ಕುಳಿತ ಕಾರಣ ಈ ಹತ್ಯೆ ನಡೆದಿದೆ. ಈ ಹತ್ಯೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಕೋಮು ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗಿದೆ.ಸರ್ಕಾರದ ಕಠಿಣ ಕ್ರಮಗಳು ಹೇಳಿಕೆಗೆ ಮಾತ್ರ ಸೀಮಿತ ವಾಗಿರುವ ಕಾರಣ ಹತ್ಯಾ ಕೋರರು ಇಲ್ಲಿ ವಿಜೃಂಭಿಸುತ್ತಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಕೋಮು ಪ್ರಚೋದನೆ ಭಾಷಣ ಗಳಿಗೆ ಕಡಿವಾಣ ಹಾಕಲಿ ಹಾಗೂ ಅಮಾಯಕ ರಹೀಮ್ ಹತ್ಯೆಯ ಅಪರಾಧಿಗಳಿಗೆ ಅರ್ಹ ಶಿಕ್ಷೆ ಯಾಗುವಂತೆ ಮಾಡಲಿ.