ಪೌರಕಾರ್ಮಿಕರ ಕ್ವಾಟ್ರಸ್ ಮೇಲೆ ಉರುಳಿದ ಮರ : ಕುಟುಂಬ ಕೂದಲೆಳೆ ಅಂತರದಲ್ಲಿ ಪಾರು

ಮಂಗಳೂರು : ಮಂಗಳೂರಿನ ಬೆಂದೂರು ವೆಲ್ ಲೋಬೊ ಲೇನ್ ಪ್ರದೇಶದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಪೌರಕಾರ್ಮಿಕರ ಕ್ವಾಟ್ರಸ್ ಬಳಿ ಬೃಹತ್ ಮರ ಒಂದು ಬಿದ್ದು ಪೌರಕಾರ್ಮಿಕ ಕುಟುಂಬ ಒಂದು ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.ಬೃಹತ್ ಮರ ಬೀಳುವ ಸಂದರ್ಭ ಪಾತ್ರ ತೊಳೆಯುತ್ತಿದ್ದ ಮಹಿಳೆ ತಪ್ಪಿಸಿಕೊಂಡಿದ್ದಾರೆ.


ಇಲ್ಲಿನ ಕ್ವಾಟ್ರಸ್ ಹಿಂಭಾಗದಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ 50ಕ್ಕೂ ಅಧಿಕ ಮರಗಳಿದ್ದು ಗುಡ್ಡ ಪ್ರದೇಶ ಈಗಾಗಲೇ ಬಿರುಕು ಬಿಟ್ಟಿದೆ. ಅಲ್ಲದೆ ಬೃಹತ್ ಮರಗಳು ಇಲ್ಲಿನ ನಾಲ್ಕು ಕ್ವಾಟ್ರಸ್ ಮೇಲೆ ಬೀಳುವ ಹಂತದಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ತಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಮರಗಳನ್ನು ತೆರವುಗೊಳಿಸಲು ಸೂಚಿಸುವುದಾಗಿ ಭರವಸೆ ನೀಡಿದ್ದರೆ. ಆದರೆ ಸುರಿಯುತ್ತಿರುವ ಭಾರಿ ಮಳೆಗೆ ಇನ್ನುಳಿದಿರುವ ಮರಗಳು ಯಾವುದೇ ಕ್ಷಣದಲ್ಲಿ ಬೀಳಲು ಸಿದ್ಧವಾಗಿದ್ದು ಪೌರ ಕಾರ್ಮಿಕ ಕುಟುಂಬಗಳು , ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಸನ್ನಿವೇಶ ಎದುರಾಗಿದೆ.

ಮರಗಳನ್ನು ತೆರೆವುಗೊಳಿಸಲು ವರ್ಷಗಳ ಹಿಂದೆಯೇ ವಾಸಿಸುವ ಕುಟುಂಬಗಳು ಮನವಿ ನೀಡಿದ್ದರೂ  ತೆರವುಗೊಳಿಸಿಲ್ಲ . ಇದೀಗ ಮಳೆ ಆರಂಭವಾದ ಸಂದರ್ಭ ತೆರವಿನ ಭರವಸೆ ಮಾತ್ರ ದೊರಕಿದೆ. ಕ್ವಾಟ್ರಸ್ ಬಿಟ್ಟು ಬೇರೆ ಕಡೆ ತೆರಳಲು ಯಾವುದೇ ಅವಕಾಶಗಳಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಕುಟುಂಬದ ಸುರಕ್ಷತೆಯ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಮರಗಳನ್ನು ತೆರವುಗೊಳಿಸಬೇಕು.ಸುತ್ತಮುತ್ತ ಗುಡ್ಡ ಕುಸಿದು ಬೀಳದಂತೆ ತಡೆಗೋಡೆ ನಿರ್ಮಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

 

 

 

 

error: Content is protected !!