ಹಳೆಯಂಗಡಿ: 10 ನೇ ತೋಕೂರು ಗ್ರಾಮದಲ್ಲಿ ತೋಕೂರು ಮದ್ದೇರಿ ದೈವಸ್ಥಾನದ ಸಮಗ್ರ ಜೀರ್ಣೋದ್ದಾರದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಮದ್ದೇರಿ ಸಾನದಲ್ಲಿ ಉಲ್ಲಾಯ, ಮೈಸಂದಾಯ, ಕಾಂತೇರಿ ಜುಮಾದಿ ಬಂಟ, ಸಾರಾಳ ಜುಮಾದಿ ಬಂಟ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು
ನೇಮೋತ್ಸವದ ಅಂಗವಾಗಿ ನಮ್ಮ ಜವನೆರ್ ತೋಕೂರು ಇವರ ವತಿಯಿಂದ ಮೇ 8 ಗುರುವಾರದಂದು ರಾತ್ರಿ ನಡೆದ “ಪೊರಿಪುದಪ್ಪೆ ಜಲದುರ್ಗೆ” ನಾಟಕ ಪರವೂರ ದಾನಿಗಳು ಸಹಕಾರದಿಂದ ಬಹಳ ವಿಜೃಂಭಣೆಯಿಂದ ನಡೆಯಿತು.
ಬಾಕಿ ಉಳಿದ ಧನ ಸಹಾಯದಿಂದ ಮದ್ದೇರಿ ದೈವಸ್ಥಾನಕ್ಕೆ ಸುಮಾರು 25ಸಾವಿರ ವೆಚ್ಚದ ಚೆಯರ್ ಗಳನ್ನು ನೀಡಲಾಯಿತು. ಈ ಸಂದರ್ಭ ದಲ್ಲಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಮೋಹನ್ ದಾಸ, ಪ್ರಧಾನ ಕಾರ್ಯದರ್ಶಿ ಹೇಮನಾಥ ಅಮೀನ್, ಕೋಶಾಧಿಕಾರಿ ಪುರುಷೋತ್ತಮ ಕೋಟ್ಯಾನ್, ಬೆಂಗಳೂರು ಸಮಿತಿಯ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ,ಸತೀಶ್ ಮೂಲ್ಯ ನೇಲ್ಯಇಲ್, ನಮ್ಮ ಜವನೆರ್ ತಂಡದ ಗಣೇಶ್ ಪೂಜಾರಿ, ಜಗದೀಶ್ ಕುಲಾಲ್, ಸಂತೋಷ್ ದೇವಾಡಿಗ, ಮುಖೇಶ್ ಸುವರ್ಣ, ಧರ್ಮಾನಂದ ಶೆಟ್ಟಿಗಾರ್ ಮತ್ತು ದೈವಸ್ಥಾನದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಸದಸ್ಯೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.