ದೇವಾಡಿಗ ಸಂಘ ಕಟ್ಟಡದ ಅನುದಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ – ಮಿಥುನ್ ರೈ

ಹಳೆಯಂಗಡಿ : ರಾಜ್ಯಕ್ಕೆ ದಕ್ಷ ಮುಖ್ಯಮಂತ್ರಿಯನ್ನು ನೀಡಿದ ಸಮುದಾಯ ದೇವಾಡಿಗ ಸಮುದಾಯ. ಇವರ ಸಂಘಟನೆಗೆ ಅನುಕೂಲವಾಗುವಂತೆ ನಿರ್ಮಿಸುತ್ತಿರುವ ಸಮುದಾಯ ಭವನಕ್ಕಾಗಿ ಸಲ್ಲಿಸಿದ ಮನವಿಯನ್ನು ಪರಿಶೀಲಿಸುವೆ. ಸರಕಾರದ ಹಂತದಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಸರಕಾರದ ಅನುದಾನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಿಥುನ್ ಎಂ ರೈ ನುಡಿದರು. ಅವರು ಹಳೆಯಂಗಡಿ ಪಾವಂಜೆ ದೇವಾಡಿಗ ಸಂಘದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಪಡೆದರು.

 

 

ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆ,ಮಹಿಳಾ ವೇದಿಕೆ, ಯುವ ವೇದಿಕೆ, ಸೇವಾ ಟ್ರಸ್ಟಿನ ಸಂಯುಕ್ತ ಆಶ್ರಯ ದಲ್ಲಿ ಭಜನೋತ್ಸವವು ಬೆಳಿಗ್ಗೆ 6.05 ಸಂಜೆ 6.55 ಗಂಟೆವರೆಗೆ ನಡೆಯಲಿದ್ದು ಸುಮಾರು ಹನ್ನೊಂದು ತಂಡಗಳು ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಶ್ರೀ ರಘು ದೇವಾಡಿಗ ಉಪಾಧ್ಯಕ್ಷರು, ಶ್ರೀ ವಿಠ್ಠಲ ದೇವಾಡಿಗ , ಶ್ರೀ ಲಿಂಗಪ್ಪ ದೇವಾಡಿಗ, ರಮೇಶ್ ದೇವಾಡಿಗ ಪಾವಂಜೆ ಇವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಲಾಯಿತು.

 

 

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಎಚ್ ವಸಂತ ಬರ್ನಾಡ್ ಸ್ಥಳೀಯ ನಾಯಕರುಗಳಾದ ಅಧ್ಯಕ್ಷ ಶ್ರೀ ಅಣ್ಣಪ್ಪ ದೇವಾಡಿಗ, ಯಾದವ ದೇವಾಡಿಗ, ಜನಾರ್ದನ ಪಡುಪಣಂಬೂರು, ರಮೇಶ್ ದೇವಾಡಿಗ ತೋಕೂರು, ರಾಮದಾಸ್ ಪಾವಂಜೆ, ಜಗದೀಶ್ ಪಲಿಮಾರ್, ನಿಖಿಲ್ ದೇವಾಡಿಗ, ವಾಮನ ದೇವಾಡಿಗ, ಸುಬ್ರತ್, ಹಾಗೂ ಸಂಘದ ಸದಸ್ಯರು ಯುವ ವೇದಿಕೆ ಅಧ್ಯಕ್ಷರು, ಹಾಗೂ ಸದಸ್ಯರು,ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ, ಮಂಜುಳಾ ಸುಬ್ರತ್, ಅನುಪಮಾ ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಅಣ್ಣಪ್ಪ ದೇವಾಡಿಗ ಸ್ವಾಗತಿಸಿದರು.

 

error: Content is protected !!