ನವದೆಹಲಿ: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಉಗ್ರರನ್ನು ಉಡೀಸ್ ಮಾಡಿದ್ದ ಭಾರತದ ವಾಯುಸೇನೆ ಇದೀಗ ಪಾಕಿಸ್ತಾನ ವಾಯುನೆಲೆಯನ್ನೇ ಟಾರ್ಗೆಟ್ ಮಾಡಲಾರಂಭಿಸಿದೆ. ರಾಜಸ್ಥಾನ ಜೈಸಲ್ಮೇರ್, ಜಮ್ಮು ಕಾಶ್ಮಿರದ ವಾಯುನೆಲೆ ಕೇಂದ್ರೀಕರಿಸಿ ಪಾಕಿಸ್ತಾನದ ಕ್ಷಿಪಣಿ, ಡ್ರೋನ್, ಹಾಗೂ ಫೈಟರ್ ಜೆಟ್ಗಳನ್ನು ಹೊಡೆದುರುಳಿಸಲಾಗುತ್ತಿದೆ.
ಜಮ್ಮು ವಾಯುನೆಲೆ, ಜೈಸಲ್ಮೇರ್, ಪಠಾಣ್ಕೋಟ್, ಅಖ್ನೂರ್, ರಾಜೌರಿ,ಪೂಂಚ್, ತಂಗಹಾರ್, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದೆ. ಆದರೆ, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಅಲ್ಲದೇ ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ಅನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ.
ಇದೀಗ ಬಂದ ಮಾಹಿತಿ ಪ್ರಕಾರ, ಭಾರತದ ಕ್ಷಿಪಣಿಗಳನ್ನು ಆಕಾಶ ಮಾರ್ಗದಲ್ಲೇ s-400 ಟ್ರ್ಯಂಫ್ ಎಂಬ ಬಲಾಢ್ಯ ಧ್ವಂಸ ಮಾಡಿದೆ. ಅಲ್ಲದೆ ಪಾಕಿಸ್ತಾನದ ಹೊಡೆದುರುಳಿದ ಯುದ್ಧವಿಮಾನದ ಪೈಲಟ್ ಓರ್ವನನ್ನು ಸೇನೆ ವಶಕ್ಕೆ ಪಡೆದಿದೆ.
ಪಾಕ್ ವಾಯುನೆಲೆಯೇ ಟಾರ್ಗೆಟ್:
ಭಾರತದ ಸೇನೆ ಮೊದಲು ಉಗ್ರರ ನೆಲೆಯನ್ನು ಮಾತ್ರ ಟಾರ್ಗೆಟ್ ಮಾಡಿತ್ತು. ಆದರೆ ಇದೀಗ ವಾಯುನೆಲೆಯನ್ನೇ ಟಾರ್ಗೆಟ್ ಮಾಡಿರುವ ಭಾರತ ಪಾಕಿಸ್ತಾನದ ಐದು ವಾಯುನೆಲೆಯನ್ನು ಟಾರ್ಗೆಟ್ ಮಾಡಿ ನಿಖರ ದಾಳಿ ನಡೆಸಿದೆ.
ಭಾರತದ ಅಂಬಾಲ ವಾಯುನೆಲೆಯಿಂದ ಪಾಕಿಸ್ತಾನದ ಪಂಜಾಬ್ ವಾಯುನೆಲೆಯನ್ನು ಉಡೀಸ್ ಮಾಡಲಾಗಿದೆ.
ಲಾಹೋರ್, ಇಸ್ಲಮಾಬಾದ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸೇರಿ ಐದು ವಾಯುನೆಲೆಯನ್ನೇ ಟಾರ್ಗೆಟ್ ಮಾಡಿರುವ ಭಾರತ ದಾಳಿ ಆರಂಭಿಸಿದೆ. ಅಲ್ಲದೆ ಭಾರತದ ವಾಯುಸೇನೆ ಪಾಕಿಸ್ತಾನದ ಮೂರು ಚೀನಾ ಮೇಡ್ ಮೂರು JF17 ವಿಮಾನವನ್ನು ಎಸ್-400, ಪೃಥ್ವಿ ಮೂಲಕ ಧ್ವಂಸ ಮಾಡಲಾಗಿದೆ. ಪಾಕಿಸ್ತಾನ ಅಕ್ಷರಶಃ ತತ್ತರಿಸಿದ್ದು, ಯುದ್ಧ ನಿಲ್ಲಿಸುವಂತೆ ಅಮೆರಿಕಾದ ಮೊರೆ ಹೋಗಿದೆ ಎಂದು ತಿಳಿದುಬಂದಿದೆ.
ಅರೆಸೇನಾ ಪಡೆ ಸಜ್ಜು: ಪಾಕ್ ದಾಳಿ ನಡೆಸುತ್ತಿದ್ದಂತೆ ಅರೆಸೇನಾ ಪಡೆ ಸಜ್ಜಾಗಿರುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣಗಳಿಗೆ ಭದ್ರತೆ ವಹಿಸಲಾಗಿದ್ದು, ಚಂಡೀಗಡ, ಲೂದಿಯಾನ, ಜಮ್ಮು ಪಶ್ಚಿಮ ಭಾರತದ ಎಲ್ಲಾ ವಾಯುನೆಲೆಯನ್ನು ಕ್ಲೋಸ್ ಮಾಡಲಾಗಿದೆ.