ಪತಿಯನ್ನು ಕೊಂದು ʻಮೋದಿಗೆ ಹೋಗಿ ಹೇಳುʼ ಎಂದರು: ಉಗ್ರ ದಾಳಿಯ ಕರಾಳತೆಯನ್ನು ಬಿಚ್ಚಿಟ್ಟ ಶಿವಮೊಗ್ಗದ ಪಲ್ಲವಿ

ಶಿವಮೊಗ್ಗ: ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಉದ್ಯಮಿ ಮಂಜುನಾಥ್‌ ರಾವ್‌ ಅವರ ಪತ್ನಿ ಪಲ್ಲವಿ ಭಯೋತ್ಪಾದಕರ ಕ್ರೂರತೆಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಮಗನೆದುರೇ ಪತಿಯನ್ನು ಕೊಂದ ಉಗ್ರರು, ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದು ಹೇಳಿದ್ದಾಗಿ ಪಲ್ಲವಿ ಹೇಳಿದ್ದಾರೆ.

‘ನಾವು ತಿಂಡಿ ತಿನ್ನುತ್ತಿದ್ದಾಗ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದ್ದಾರೆ. ನೀನು ಹಿಂದೂನ ಎಂದು ಕೇಳಿ, ಪರಿಶೀಲಿಸಿ, ಬಳಿಕ, ಒಂದೇ ಗುಂಡೇಟಿಗೆ ನನ್ನ ಗಂಡನನ್ನು ಕೊಂದಿದ್ದಾರೆ. ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿ, ಅವರ ಧರ್ಮ ಕೇಳಿ ಸಾಯಿಸಿದ್ದಾರೆ. ಮುಸ್ಲಿಮರನ್ನು ಬಿಟ್ಟು ಕಳುಹಿಸಿದ್ದಾರೆ. ‘ನನ್ನ, ನನ್ನ ಮಗನ ಮೇಲೂ ಗುಂಡು ಹಾರಿಸಿ’ ಎಂದು ಉಗ್ರರಿಗೆ ಹೇಳಿದೆ. ಅದಕ್ಕವರು ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದರು’.
ಜಮ್ಮು-ಕಾಶ್ಮೀರದ ಪಹಾಲ್ಗಾಂನಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಉದ್ಯಮಿ ಮಂಜುನಾಥ್‌ ರಾವ್‌ ಅವರ ಪತ್ನಿ ಪಲ್ಲವಿಯವರ ಆಕ್ರಂದನದ ನುಡಿಗಳಿವು.

ಮಾಧ್ಯಮವೊಂದರ ಜೊತೆ ದುಃಖ ತೋಡಿಕೊಂಡ ಪಲ್ಲವಿ, ‘ನನ್ನ ಮಗನಿಗೆ ತಿಂಡಿ ತಿನ್ನುವ ಆಸೆಯಾಯಿತು. ಆದ್ದರಿಂದ, ನನ್ನ ಪತಿ ಅದನ್ನು ಖರೀದಿಸಲು ಮಗನೊಂದಿಗೆ ಯಾವುದೋ ಅಂಗಡಿಗೆ ಹೋದರು. ಆಗ ನಮಗೆ ಗುಂಡಿನ ಶಬ್ದ ಕೇಳಿಸಿತು. ನಾನು ನನ್ನ ಪತಿಯನ್ನು ನೋಡಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗ ಸಹ ಪ್ರವಾಸಿಗರು ‘ಭಾಗೋ ಭಾಗೋ’ ಎಂದು ಕೂಗಲು ಪ್ರಾರಂಭಿಸಿದರು. ನನ್ನ ಗಂಡನನ್ನು ಕೊಂದು ನನ್ನ ಮಗನಿಗೆ ಬೈದು ಹಲ್ಲೆ ಮಾಡಿದ್ದಾರೆ. ಅವರತ್ತ ಓಡಿ ‘ನಮ್ಮಿಬ್ಬರ ಮೇಲೂ ಗುಂಡು ಹಾರಿಸಿ’ ಎಂದು ಉಗ್ರರಿಗೆ ಹೇಳಿದೆ. ಅವರು ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದು ಹೇಳಿದರು. ನನ್ನ ಪತಿಯನ್ನು ಕೊಂದ ಉಗ್ರರು ಅಲ್ಲೇ ಓಡಾಡುತ್ತಿದ್ದರು. ಬಿಸ್ಮಿಲ್ಲಾ, ಬಿಸ್ಮಿಲ್ಲಾ ಎನ್ನುತ್ತಿದ್ದ ಮೂವರು ಮುಸ್ಲಿಮರು ನನ್ನ ಮತ್ತು ನನ್ನ ಮಗ ಸೇರಿದಂತೆ ಹಲವರನ್ನು ಸುರಕ್ಷಿತವಾಗಿ ಕೆಳಗೆ ಕರೆದುಕೊಂಡು ಬಂದರು’ ಎಂದು ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ಪತ್ನಿ ಪಲ್ಲವಿ ಘಟನೆ ಬಗ್ಗೆ ಮಾಧ್ಯದವರಿಗೆ ಹೇಳುತ್ತ ಕಣ್ಣೀರಾದರು.
‘ನಾವು ಏ.19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಇದು ಗುಡ್ಡಗಾಡು ಪ್ರದೇಶವಾದ್ದರಿಂದ ಕಣಿವೆಯ ಮೂಲಕ ಹಾದುಹೋಗಲು ಕುದುರೆಗಳನ್ನು ಬಾಡಿಗೆಗೆ ಪಡೆಯಬೇಕಾಯಿತು. ಕೆಲವು ದಿನಗಳವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಇಂದು ದುರಂತ ಘಟನೆ ಸಂಭವಿಸಿದೆ’ ಎಂದು ಕಂಬನಿಗರೆದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಹಾಯಕ್ಕಾಗಿ ಸಹಾಯವಾಣಿಗಳು:

ತುರ್ತು ನಿಯಂತ್ರಣ ಕೊಠಡಿ – ಶ್ರೀನಗರ:
0194-2457543, 0194-2483651
ಆದಿಲ್ ಫರೀದ್, ಎಡಿಸಿ ಶ್ರೀನಗರ – 7006058623
24/7 ಪ್ರವಾಸಿ ಸಹಾಯ ಕೇಂದ್ರ – ಪೊಲೀಸ್ ನಿಯಂತ್ರಣ ಕೊಠಡಿ, ಅನಂತನಾಗ್
9596777669 | 01932-225870
ವಾಟ್ಸಾಪ್: 9419051940
ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ಸಹಾಯವಾಣಿಗಳು:
ಯಾವುದೇ ಸಹಾಯ ಮತ್ತು ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:
8899931010
8899941010
99066 63868 (ನಿಸ್ಸಾರ್ ಪ್ರವಾಸೋದ್ಯಮ ಸಹಾಯಕ ನಿರ್ದೇಶಕರು)
99069 06115 (ಮುದಸ್ಸಿರ್ ಪ್ರವಾಸಿ ಅಧಿಕಾರಿ)

error: Content is protected !!