ಎಲ್ಲಿಗೆ ಹೋದಳು ಯಲ್ಲಮ್ಮ?

ಮಂಗಳೂರು: ಹೊರಗಿನಿಂದ ಬೀಗ ಹಾಕಿ ಲಾಕ್‌ ಮಾಡಿದ್ದ ಮನೆಯಿಂದ ಹದಿನೆಂಟರ ಹರೆಯದ ಯುವತಿಯೋರ್ವಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಬಜಲ್‌ನ ಕಟ್ಟಪುಣಿಯಲ್ಲಿ ವಾಸವಾಗಿದ್ದ ಕೊಪ್ಪಳ ಮೂಲದ ಶಿವಪುತ್ರಪ್ಪ ಅವರ ಪುತ್ರಿ ಯಲ್ಲಮ್ಮ (18) ನಾಪತ್ತೆಯಾದ ಹುಡುಗಿ.

ಶಿವಪುತ್ರಪ್ಪ ಅವರು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಉಳ್ಳಾಲದ ಆಜಾದ್ ನಗರದಲ್ಲಿ ದಿನಗೂಲಿ ಕೆಲಸಕ್ಕೆ ತೆರಳಿದ್ದು, ಅವರ ಪತ್ನಿಯೂ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭ ಯಲ್ಲಮ್ಮ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಆದರೆ, ಸಂಜೆ ಪೋಷಕರು ಹಿಂತಿರುಗಿದಾಗ, ಮನೆ ಹೊರಗಿನಿಂದ ಬೀಗ ಹಾಕಲಾಗಿತ್ತು ಮತ್ತು ಯಲ್ಲಮ್ಮ ನಾಪತ್ತೆಯಾಗಿದ್ದಳು.
ಬೀಗದ ಕೈ ಹತ್ತಿರದಲ್ಲೇ ಬಿದ್ದಿತ್ತು. ಜೊತೆಗೆ ಆಕೆಯ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಎಲ್ಲಾ ಸ್ಥಳಗಳಲ್ಲಿ ಆಕೆಗಾಗಿ ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಯಲ್ಲಮ್ಮ ಸುಮಾರು 4 ಅಡಿ ಎತ್ತರ ಹೊಂದಿರುವ ಯಲ್ಲಮ್ಮ ಎಣ್ಣೆ ಕಪ್ಪು ಮೈಬಣ್ಣ, ದೃಢವಾದ ಮೈಕಟ್ಟು ಮತ್ತು ದುಂಡಗಿನ ಮುಖವನ್ನು ಹೊಂದಿದ್ದಾಳೆ. ಆಕೆ ಚೂಡಿದಾರ್ ಧರಿಸಿದ್ದಳು ಮತ್ತು ಕನ್ನಡ ಮಾತನಾಡುತ್ತಾಳೆ. ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!