“ದೇವತಾ ಕಾರ್ಯಗಳಿಂದ ಗ್ರಾಮದ ಅಭಿವೃದ್ಧಿ ಸಾಧ್ಯ” -ಒಡಿಯೂರು ಶ್ರೀ

ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆ


ಸುರತ್ಕಲ್
: ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ, ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ,ವಿರಾಟ್ ಭಜನೋತ್ಸವ ಹಾಗೂ ಶ್ರೀ ಜಾರಂದಾಯ ದೈವದ ನೇಮೋತ್ಸವದ ಪ್ರಯುಕ್ತ ಕಾಟಿಪಳ್ಳ, ಕೃಷ್ಣಾಪುರ ಸೂರಿಂಜೆ,ಚೇಳ್ಯಾರ್, ಮಧ್ಯ,ಸುರತ್ಕಲ್ ಕುಳಾಯಿ ಸಹಿತ ವಿವಿಧ ಗ್ರಾಮದ ಸಂಘ ಸಂಸ್ಥೆಗಳು ಹಾಗೂ ಭಕ್ತಾದಿಗಳು ನೀಡಿದ ಹೊರೆಕಾಣಿಕೆ ಯನ್ನು ಕೃಷ್ಣಾಪುರದ ಯುವಕ ಮಂಡಲದ ವಠಾರದಲ್ಲಿ ಬೃಹತ್ ಹೊರೆ ಕಾಣಿಕೆ ಮೆರವಣಿಗೆಗೆ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ದತ್ತ ಶ್ರೀ ಸ್ವಾಮೀಜಿಯವರು ಚಾಲನೆ ನೀಡಿ ದೇವತಾ ಕಾರ್ಯಗಳಿಗೆ ಭಕ್ತಾದಿಗಳು ನೀಡುವ ತನು ಮನದ ಸಹಕಾರ ಸ್ಮರಣೀಯ ಎಂದರು.


ಗ್ರಾಮದ ಅಭ್ಯುದಯ ದೇವತಾ ಕಾರ್ಯದಿಂದಲೇ ಸಾಧ್ಯ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಡಾ.ಭರತ್ ವೈ ಶೆಟ್ಟಿ ಮಾತನಾಡಿ, “ಹೊರೆ ಕಾಣಿಕೆ ಮೆರವಣಿಗೆಯು ವಿರಾಟ್ ಹಿಂದೂ ಸಮುದಾಯದ ಶಕ್ತಿ ಕೇಂದ್ರವಾಗಿದೆ ದೇವಸ್ಥಾನದ ಶುಭಕಾರ್ಯದ ಯಶಸ್ಸಿನ ಹಿಂದೆ ಗ್ರಾಮದ ಭಕ್ತಾದಿಗಳ ಸರ್ವ ಸಹಕಾರ ಅತ್ಯಗತ್ಯ. ಇಂದಿನ ವಿರಾಟ್ ಹೊರ ಕಾಣಿಕೆಯಲ್ಲಿ ಸೇರಿದ ಭಕ್ತ ಸಮುದಾಯ ಹಾಗೂ ಹೊರೆ ಕಾಣಿಕೆ ವಸ್ತುಗಳನ್ನು ಗಮನಿಸಿದಾಗ ಭಕ್ತಾದಿಗಳ ಮನೋಸೈರ್ಯ ಮೆಚ್ಚುವಂತದ್ದು“ ಎಂದರು.

ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ದೇವಸ್ಥಾನದ ಮುಂದಿನ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಸರ್ವಭಕ್ತರ ಸಹಕಾರವನ್ನು ಕೋರಿ ದೇವಸ್ಥಾನದ ಹಾಗೂ ಶ್ರೀ ಕ್ಷೇತ್ರ ಗಣೇಶ ಪುರ ಮಹಾ ಗಣಪತಿ ದೇವಸ್ಥಾನ ಹಾಗೂ ಕೃಷ್ಣಾಪುರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಮರಣೀಯ ಸೇವೆಯನ್ನು ನೆನಪಿಸಿ ಶ್ರೀ ಕ್ಷೇತ್ರಕ್ಕೆ ಅಂದು ನೀಡಿದ ಶ್ರೀ ಗಣೇಶ ಮೂರ್ತಿ ಇಂದು ಭಕ್ತ ಜನರ ಆರಾಧ್ಯ ಕೇಂದ್ರವಾಗಿದೆ ಎಂದರು.

ವೇದಿಕೆಯಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ,ಜೆ ಡಿ ವೀರಪ್ಪ, ಮಹಾಬಲ ಪೂಜಾರಿ ಕಡಂಬೋಡಿ, ಅನಿಲ್ ಶೆಟ್ಟಿ ತೇವು ಸೂರಿಂಜೆ, ತಿಲಕ್ ರಾಜ್ ಕೃಷ್ಣಾಪುರ, ಸುಕುಮಾರ ಭಂಡಾರಿ,ಬ್ರಹ್ಮಕಲೋತ್ಸವ ಸಮಿತಿಯ ಅಧ್ಯಕ್ಷ ಯಾದವ ಕೋಟ್ಯಾನ್,,ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಧಾಮ ಶೆಟ್ಟಿ, ಪ್ರವೀಣ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಪ್ರಶಾಂತ್ ಮುಡಾಯಿಕೊಡಿ ಧನ್ಯವಾದ ಸಮರ್ಪಿಸಿ ಸುಧಾಕರ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!