ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಣ್ಮೂರು ಶ್ರೀನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೆರ್ಗಳ ನೇಮ ಎ. 11ರ ಶುಕ್ರವಾರದಂದು ನಡೆಯಲಿದೆ. ಎ.11ರಂದು ಮಧ್ಯಾಹ್ನ 12.30ಕ್ಕೆ ಎಣ್ಮೂರು ಕಟ್ಟಬೀಡಿನಿಂದ ಭಂಡಾರ ತೆಗೆದು ರಾತ್ರಿ 8 ಗಂಟೆಗೆ ಎಣ್ಮೂರು ಆದಿ ಬೈದೇರ್ಗಳ ನೇಮ ನಡೆಯಲಿದೆ ಎಂದು ಅನುವಂಶಿಕ ಆಡಳಿತದಾರ ಕಟ್ಟ ಬೀಡು ರಾಮಕೃಷ್ಣ ಶೆಟ್ಟಿ ತಿಳಿಸಿದ್ದಾರೆ.