ವಿಪ್ರ ಮಹಿಳಾ ದಿನಾಚರಣೆ – ಗಾರ್ಗಿ ಎನ್ ಶಬರಾಯ ಅವರಿಗೆ ಸನ್ಮಾನ


ಉಡುಪಿ:
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ “ವಿಪ್ರ ಮಹಿಳಾ ದಿನಾಚರಣೆ 2025″ ನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು .
ಸಂಪನ್ಮೂಲ ವ್ಯಕ್ತ್ತಿಯಾಗಿ ಆಗಮಿಸಿದ ಡಾ. ರಾಜೇಶ್ವರಿ ಜಿ ಭಟ್ , HOD , OBG dept ಕೆಎಂಸಿ ಮಣಿಪಾಲ ಇವರು ಮಹಿಳೆಯರ PCOD ಸಮಸ್ಯೆ ಬಗ್ಗೆ ಉಪನ್ಯಾಸ ನೀಡಿದರು .

ಬಹುಮುಖ ಪ್ರತಿಭೆಯ ವಿದುಷಿ ಶ್ರೀಮತಿ ಗಾರ್ಗಿ ಎನ್ ಶಬರಾಯ ಅವರಿಗೆ “ಸಂಗೀತ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು.

ಇದಕ್ಕೂ ಮೊದಲು ವಿಪ್ರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಸುಧಾ ಹರಿದಾಸ್ ಭಟ್ ನಡೆಸಿದರು .ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ಹಾಗೂ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು .

ಕಾರ್ಯದರ್ಶಿ ನಾಗರಾಜ್ ಭಟ್ ,ಕೋಶಾಧಿಕಾರಿ ಅಜಿತ್ ಬಿಜಾಪುರ್ ,ಮಹಿಳಾ ಪ್ರತಿನಿಧಿ ಶ್ಯಾಮಲಾ ರಾವ್ ಉಪಸ್ಥಿತ ರಿದ್ದರು

ಕವಿತಾ ಲಕ್ಷ್ಮೀನಾರಾಯಣ , ವಸುಧಾ ಶ್ರೀಕೃಷ್ಣರಾಜ್ ,ರಾಧಿಕಾ ಚಂದ್ರಕಾಂತ್ , ಜಯಶ್ರೀ ಬಾರಿತ್ತಾಯ ಸಹಕರಿಸಿದರು .ಅಂಕಿತಾ ನಿರೂಪಿಸಿ ಪೂರ್ಣಿಮಾ ಹೆಬ್ಬಾರ್ ವಂದಿಸಿದರು .

error: Content is protected !!