“ಬಡಕುಟುಂಬದ ಕಣ್ಣೀರು ಒರೆಸುವುದು ಶ್ಲಾಘನೀಯ ಕಾರ್ಯ -ಸಯ್ಯದ್ ಸ್ವಾದಿಕಲಿ ಶಿಹಾಬ್ ತಂಙಳ್

ಉಳ್ಳಾಲ: ಬಡಹೆಣ್ಮಕ್ಕಳ ಜೀವನಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ ವಿವಾಹ ಮಾಡಿಕೊಡುವುದು ಅತ್ಯಂತ ಮಹತ್ವದ ಕಾರ್ಯ ಎಂದು ಪಾಣಕ್ಕಾಡ್ ಸಯ್ಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಅಭಿಪ್ರಾಯಪಟ್ಟರು.
ಅನಿ ಚಾರಿಟೇಬಲ್ ಫೌಂಡೇಶನ್ ಆಶ್ರಯದಲ್ಲಿ ಉದ್ಯಮಿ ಲತೀಫ್ ಗುರುಪುರ ನೇತೃತ್ವದಲ್ಲಿ ಭಾನುವಾರ ತಲಪಾಡಿ ಸಮೀಪದ ಉಚ್ಚಿಲದಲ್ಲಿ ನಡೆದ ಹತ್ತು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡ ಹೆಣ್ಮಕ್ಕಳ ಕಣ್ಣೀರು ಒರೆಸುವ ಸಾಮೂಹಿಕ ವಿವಾಹಕ್ಕಾಗಿ ಸಂಘಟಕರು ಪಟ್ಟ ಶ್ರಮ ಫಲ ನೀಡಬೇಕಾದರೆ ನೂತನ ದಂಪತಿ ಪರಸ್ಪರ ಅರ್ಥಮಾಡಿಕೊಂಡು ಜೀವನ ಸಾಗಿಸಬೇಕಿದೆ ಎಂದು ತಿಳಿಸಿದರು.
ರಾಜಕೀಯ ಮುಖಂಡ ರಿಯಾಝ್ ಕಡಂಬು ಮಾತನಾಡಿ, ನೊಂದವರ ಪಾಲಿಗೆ ಸದಾ ನೆರವಿನ ಹಸ್ತ ಚಾಚುತ್ತಾ ಬಂದಿರುವ ಅನಿ ಚಾರಿಟೇಬಲ್ ಫೌಂಡೇಶನ್ ಸಾಮೂಹಿಕ ವಿವಾಹದ ಮೂಲಕ ತಮ್ಮ ಸೇವೆ ಇನ್ನಷ್ಟು ವಿಸ್ತರಿಸಿದ್ದು ಇತರ ಸಿರಿವಂತರಿಗೆ ಮಾದರಿ ಎಂದು ಹೇಳಿದರು.
ಸಯ್ಯದ್ ಜಿಫ್ರಿ ತಂಙಳ್ ಬೆಳ್ತಂಗಡಿ ಉದ್ಘಾಟಿಸಿದರು. ಸಯ್ಯದ್ ಅಲೀ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದರು. ಸಯ್ಯದ್ ಜಮಲುಲ್ಲೈಲಿ ತಂಙಳ್ ಕಾಜೂರು ಲೋಗೋ ಬಿಡುಗಡೆಗೊಳಿಸಿದರು. ಜಮಾಲುದ್ದೀನ್ ದಾರಿಮಿ ಕುತುಬಾ ಪಾರಾಯಣಗೈದರು.
ಸಮಸ್ತ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಸಯ್ಯದ್ ಅಮೀರ್ ತಂಙಳ್ ಕಿನ್ಯ, ಇಬ್ರಾಹಿಂ ಬಾತಿಶಾ ತಂಙಳ್, ಉಸ್ಮಾನ್ ಫೈಝಿ ತೋಡಾರ್, ಎಸ್.ಬಿ.ದಾರಿಮಿ ಉಸ್ತಾದ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಮಜೀದ್ ದಾರಿಮಿ ಉಸ್ತಾದ್, ಶರೀಫ್ ದಾರಿಮಿ ಉಸ್ತಾದ್, ಫಿರೋಜ್ ಕುಂನ್ನುಪರಂಭಿಲ್, ಬದ್ರುದ್ದೀನ್ ಆಝ್ಹರಿ, ಹುಸೈನ್ ದಾರಿವಿ ರೆಂಜಿಲಾಡಿ, ಅನೀಸ್ ಕೌಸರಿ, ರಫೀಕ್ ಮಾಸ್ಟರ್ ಮೊದಲದವರು ಉಪಸ್ಥಿತರಿದ್ದರು.
ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

error: Content is protected !!