ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್​ ಮಾಡಿ ಬ್ಲ್ಯಾಕ್​ಮೇಲ್​: ಕೇರಳ ದೇವಸ್ಥಾನದ ಅರ್ಚಕ ಸೆರೆ, ಪ್ರಧಾನ ಅರ್ಚಕ ನಾಪತ್ತೆ

ಬೆಂಗಳೂರು: ಮಾಟ-ಮಂತ್ರ ನಿವಾರಣೆ ಮಾಡಿಸಲು ಕೇರಳದ ತ್ರಿಶೂರ್​ನ ಪ್ರತಿಷ್ಠಿತ ದೇಗುಲಕ್ಕೆ ಹೋದ ಮಹಿಳೆಗೆ ಪ್ರಧಾನ ಅರ್ಚಕ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಕೇರಳಕ್ಕೆ ಹೋಗಿದ್ದ ವೇಳೆ ಇಬ್ಬರು ಅರ್ಚಕರು ಸೇರಿ ಮಹಿಳೆ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೇರಳದ ತ್ರಿಶೂರ್​ನ ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ.

ಮಹಿಳೆಯೊಬ್ಬರು ಕುಟುಂಬ ಯಾರೋ ಮಾಟಮಂತ್ರ ಮಾಡಿದ್ದಾರೆ ಎಂದು ಭಾವಿಸಿ ನಿವಾರಣೆ ಪೂಜೆ ಮಾಡಿಸಲು ಕೇರಳದ ತ್ರಿಶೂರ್​ನ ಪೆರಿಗೊಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದರು. ಇನ್ಸ್ಟಾಗ್ರಾಂ ನೋಡಿ ಈ ದೇವಾಲಯಕ್ಕೆ ಹೋಗಿದ್ದ ಮಹಿಳೆಗೆ ದೇವಾಲಯದ ಅರ್ಚಕ ಅರುಣ್ ಪರಿಚಯ ಆಗಿತ್ತು. ಆಕೆಗೆ ಗಂಡ ಇಲ್ಲ ಎನ್ನುವ ವಿಚಾರ ಅರಿತ ಅರ್ಚಕರು ಮಹಿಳೆಗೆ ಕಿರುಕುಳ ನೀಡಲಾರಂಭಿಸಿದ್ದಾರೆ ಎನ್ನಲಾಗಿದೆ.

ಮಹಿಳೆಯ ನಂಬರ್‌ ಪಡೆದಿದ್ದ ಅರಣ್‌ ರೂ. 24 ಸಾವಿರ ಹಣ ಕೊಟ್ಟರೇ ಪೂಜೆ ಮಾಡೋದಾಗಿ ಹೇಳಿದ್ದ. ಇದಾದ ಬಳಿಕ ಅರ್ಚಕ ಮಹಿಳೆಗೆ ತಡರಾತ್ರಿಯಲ್ಲಿ ನಿರಂತರ ವಾಟ್ಸಾಪ್ ಕರೆ ಮಾಡಿದ್ದಾನೆ. ತಾನು ಬೆತ್ತಲಾಗಿ, ಮಹಿಳೆಯನ್ನು ಬೆತ್ತಲಾಗುವಂತೆ ಬಲವಂತ ಮಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಮಹಿಳೆಯ ಬೆತ್ತಲೇ ವೀಡಿಯೋ ರೆಕಾರ್ಡ್ ಮಾಡಿಕೊಂಡು ಅರ್ಚಕ ಬ್ಲಾಕ್ ಮೇಲ್..!

ನಿಮಗೆ ಮಾಡಿರೋ‌ ಮಾಟ-ಮಂತ್ರ ನಿವಾರಣೆ ಮಾಡ್ಬೇಕು ಅಂದ್ರೆ ನೀನು ಬೆತ್ತಲಾಗ್ಬೇಕು ಎಂದು ಅರ್ಚಕ ಹೇಳಿದ್ದನು. ಇದಕ್ಕೆ ಮಹಿಳೆ ನಿರಾಕರಿಸಿದ್ದು, ನೀನು ಬೆತ್ತಲಾಗಿಲ್ಲ ಅಂದ್ರೆ ಇಬ್ಬರು ಮಕ್ಕಳು ಸಾಯೋ ಹಾಗೇ ಪೂಜೆ‌ ಮಾಡ್ತೀನಿ ಅಂತ ಅರ್ಚಕ ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅರ್ಚಕನ ಬೆದರಿಕೆಗೆ ಹೆದರಿ ಮಹಿಳೆ ಬೆತ್ತಲಾಗಿದ್ದಳಂತೆ. ಬಳಿಕ ಬೆತ್ತಲೆ ಆಗೋದನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಅರ್ಚಕ ಅರುಣ್​​ ಅದೇ ವಿಡಿಯೋ ತೋರಿಸಿ ಕರೆದಾಗಲೆಲ್ಲಾ ಕೇರಳಕ್ಕೆ ಬರುವಂತೆ ಒತ್ತಾಯ ಮಾಡಿದ್ದಾನೆ ಎನ್ನಲಾಗ್ತಿದೆ.

ನೀನು ಬರುವಾಗ ಹೇಳು ರೂಂ ಬುಕ್ ಮಾಡ್ತೀನಿ ಅಂತ ಆಕೆಗೆ ಹಿಂಸೆ ಕೊಟ್ಟಿದ್ದಾರೆ. ಹಿಂಸೆ ತಾಳಲಾರದೆ ಮಹಿಳೆ ಕೇರಳಕ್ಕೂ ಹೋಗಿ ಬಂದಿದ್ದಳಂತೆ, ಈ ವೇಳೆ ಅರ್ಚಕ ಅರುಣ್ ಹಾಗೂ ಮುಖ್ಯ ಅರ್ಚಕ ಉನ್ನಿ ದಾಮೋದರ್ ಆಕೆಯ ಜೊತೆ ಅಸಭ್ಯ ವರ್ತನೆ ಮಾಡಿ, ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದರು ಎನ್ನುವ ಆರೋಪ ಕೂಡ ಇದೆ.
ಇದರಿಂದ ಬೇಸತ್ತ ಮಹಿಳೆ ಕೊನೆಗೆ ಬೆಳ್ಳಂದೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅರ್ಚಕ ಅರುಣ್ ಬಂಧನವಾಗಿದ್ದು, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿ ಆಗಿದ್ದಾನೆ. ತಡರಾತ್ರಿ ಅರುಣ್ ಮಾಡ್ತಾ ಇದ್ದ ಮೆಸೇಜ್ ಸ್ಕ್ರೀನ್ ಶಾಟ್‌ಗಳನ್ನು ಮಹಿಳೆ ಪೊಲೀಸರಿಗೆ ನೀಡಿದ್ದು ಪ್ರಕರಣ ದಾಖಲಾಗಿದೆ.

error: Content is protected !!