ನವದೆಹಲಿ : ಭಾರತೀಯ ವಾಯುಸೇನೆಗೆ ಸೇರಿದ ಅಪಾಚೆ ಹೆಲಿಕಾಪ್ಟರ್ ಶುಕ್ರವಾರ (ಜೂನ್ 13) ರಂದು ಜಮ್ಮು-ಕಾಶ್ಮೀರದ ಪಠಾಣ್ ಕೋಟ್ನ ನಂಗಲ್ಪುರದ ಹಲೆದ್ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ಮುಂಜಾಗ್ರತಾ ಕ್ರಮವಾಗಿ ತರಬೇತಿಯ ಅಪಾಚೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಇದೀಗ ವಾರದೊಳಗೆ ತುರ್ತುಭೂಸ್ಪರ್ಶ ನಡೆದ ಎರಡನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಠಾಣ್ಕೋಟ್ ವಾಯುನೆಲೆಯಿಂದ ಟೇಕಾಫ್ ಆದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ನಂತರ ಮುನ್ನೆಚ್ಚರಿಕೆಯಾಗಿ ತೆರೆದ ಮೈದಾನದಲ್ಲಿ ಇಳಿದಿದೆ ಎಂದು ವರದಿಯಾಗಿದೆ . ಅಪಾಚೆ ಹೆಲಿಕಾಪ್ಟರ್ ಯಾವ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ತುರ್ತುಭೂಸ್ಪರ್ಶದಲ್ಲಿ ಯಾವುದೇ ಅವಘಡ ನಡೆದಿಲ್ಲ ಎಂದು ವರದಿ ವಿವರಿಸಿದೆ.