ಸಿಂಗಾಪುರದ ಕಂಟೈನರ್‌ ಹಡಗು ಬೆಂಕಿಗಾಹುತಿ: 18 ಮಂದಿಯ ರಕ್ಷಣೆ, ನಾಲ್ವರು ನಾಪತ್ತೆ

ಮಂಗಳೂರು: ಕೇರಳದ ಕೊಚ್ಚಿಯ ಬೇಪೂರ್ ಸಮುದ್ರ ತೀರದಿಂದ 78 ನಾಟಿಕಲ್ ಮೈಲು ದೂರದಲ್ಲಿ ಸಿಂಗಾಪುರ ದೇಶದ ಬೃಹತ್‌ ಗಾತ್ರದ ಕಂಟೇನರ್ ಹಡಗಿನಲ್ಲಿ ಬೆಂಕಿ ಹತ್ತಿಕೊಂಡು ನಾಶವಾಗಿದ್ದು, ಅದರಲ್ಲಿದ್ದ ಸುಮಾರು 18 ಮಂದಿಯನ್ನು ಭಾರತದ ನೌಕಾಪಡೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ. ದುರದೃಷ್ಟವಶಾತ್‌ ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಗಂಭೀರ ಗಾಯಗೊಂಡ ಐವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಕಂಟೈನರ್‌ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿ ಐಎನ್ಎಸ್ ಸೂರತ್ ಶಿಪ್ ಮೂಲಕ ಪಣಂಬೂರು ಬಂದರಿಗೆ ತರಲಾಗಿದೆ. ಎಂವಿ ವ್ಯಾನ್ ಹೈ 503 ಹೆಸರಿನ ಸಿಂಗಾಪುರದ ಕಂಟೇನರ್ ಹಡಗು ಶ್ರೀಲಂಕಾದ ಕೊಲಂಬೋದಿಂದ ಮುಂಬೈ ತೆರಳುತ್ತಿದ್ದಾಗ ಕೇರಳ ಸಮುದ್ರ ತೀರದಲ್ಲಿ ದುರಂತಕ್ಕೀಡಾಗಿದೆ.

wai hai 503

ಕೊಲಂಬೋದಿಂದ ಹಡಗು ಹೊರಟಿದ್ದಾಗ ಎಂಟು ಮಂದಿ ಚೈನಾ, ನಾಲ್ಕು ಮಂದಿ ತೈವಾನ್, ನಾಲ್ಕು ಮಂದಿ ಮ್ಯಾನ್ಮಾರ್, ಇಬ್ಬರು ಇಂಡೋನೇಶ್ಯಾ ಮೂಲದವರು ಸೇರಿ ಒಟ್ಟು 22 ಮಂದಿ ಉದದ್ಯೋಗಿಗಳು ಇದ್ದರು.ಈ ಪೈಕಿ 18 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರಲ್ಲಿ ಇಬ್ಬರು ತೈವಾನ್, ಒಬ್ಬ ಇಂಡೋನೇಶ್ಯಾ ಮತ್ತು ಇನ್ನೊಬ್ಬ ಮ್ಯಾನ್ಮಾರ್ ಮೂಲದವರು ಇದ್ದಾರೆ. ಸಮುದ್ರದಲ್ಲಿ ನಾಪತ್ತೆಯಾದ ನಾಲ್ಕು ಮಂದಿ ಹುಡುಕಾಟ ಆರಂಭಿಸಲಾಗಿದೆ. ಮಂಗಳೂರು ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ರಾಜದೂತ್, ಕೊಚ್ಚಿಯ ಐಸಿಜಿಎಸ್ ಅರ್ನ್ವೇಶ್, ಅಗತ್ತಿಯ ಐಸಿಜಿಎಸ್ ಸಾಚೆಟ್ ಹಡಗಿನ ಮೂಲಕ ಭಾರತ ಕಾರ್ಯಾಚರಣೆ ನಡೆಸುತ್ತಿದೆ. ಹಡಗಿನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಎರಡನೇ ದುರಂತ: ಭಾರೀ ಆತಂಕ

ಕಳೆದ ಮೇ 25ರಂದು ಕೇರಳ ಕರಾವಳಿಯಲ್ಲಿ ಲೈಬೀರಿಯಾ ಮೂಲದ 30 ವರ್ಷ ಹಳೆಯ ಬೃಹತ್ ಕಂಟೇನರ್ ಹಡಗು ಮುಳುಗಡೆಯಾಗಿತ್ತು. ಇದೀಗ ಮತ್ತೊಂದು ಹಡಗು ದುರಂತಕ್ಕೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವೈರಿಗಳ ನಿಗೂಢ ದಾಳಿಯಿಂದ ಈ ರೀತಿ ದುರಂತ ಸಂಭವಿಸಿರಬಹುದೇ ಎನ್ನುವ ಆತಂಕ ಉಂಟಾಗಿದೆ. ಅಂದು ನಡೆದ ದುರಂತದಲ್ಲಿ ಹಡಗಿನಲ್ಲಿ ಸುಮಾರು ಲ್ಲಿ 640 ಕಂಟೇನರ್‌ಗಳಿದ್ದವು. ಈ ಆ ಪೈಕಿ 12 ಕಂಟೇನರ್ ಗಳಲ್ಲಿ ಅತ್ಯಂತ ವಿಷಕಾರಿ ರಾಸಾಯನಿಕಗಳು ತುಂಬಿದ್ದವು. ಕೆಲವು ಕಂಟೇನರ್ ಗಳು ಕೇರಳ ಕರಾವಳಿ ದಡಕ್ಕೆ ತೇಲಿ ಬಂದಿದ್ದು ದಡಕ್ಕೆ ಬಡಿಯುತ್ತಲೇ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದ್ದವು. ಇದರಿಂದಾಗಿ ಕೇರಳದ ಕರಾವಳಿ ಸಮುದ್ರ ತೀರ ತೀವ್ರ ಮಲಿನಗೊಳ್ಳುವ ಆತಂಕ ವ್ಯಕ್ತವಾಗಿದ್ದು, ಸಮುದ್ರಲ್ಲಿ ಅಥವಾ ಕಡಲ ಕಿನಾರೆಯಲ್ಲಿ ಸಿಕ್ಕ ಅಪಾಯಕಾರಿ ವಸ್ತುಗಳನ್ನು ಸ್ಪರ್ಷಿಸದಂತೆ ಕೇರಳ ಸರ್ಕಾರ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕಂಟೇನರ್ ಹಡಗು ದುರಂತಕ್ಕೀಡಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

Image

error: Content is protected !!