ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ʻಸಸಿ ವಿತರಣೆ, ವ್ಯಕ್ಷ ಸಂರಕ್ಷಣೆ, ಪರಿಸರ ಜಾಗೃತಿʼ ಕಾರ್ಯಕ್ರಮ

ಮಂಗಳೂರು: ಜೂ.5 ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ” ಕಿಶೋರ ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ಸಸಿ ವಿತರಣೆ, ವ್ಯಕ್ಷ ಸಂರಕ್ಷಣೆ, ಪರಿಸರ ಜಾಗೃತಿ ” ಕಾರ್ಯಕ್ರಮಕ್ಕೆ ಕುಣಿತ ಭಜನಾ ಶಿಕ್ಷಕರ ದೀನ್ ರಾಜ್ ಕಳವಾರ್ ಅವರು ನಿನ್ನೆ ಸಂಜೆ ಸಸಿ ವಿತರಣೆ ಮೂಲಕ ಚಾಲನೆ ನೀಡಿದರು.

ಈ ಕಾರ್ಯಕ್ರಮವನ್ನು ನನ್ನ ಭಾರತ – ಮಂಗಳೂರು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ- ಭಾರತ ಸರಕಾರ, ಪ್ರಪ್ರಥಮ 1979-80, 1988-89 ಮತ್ತು 2015-16 ನೇ ಸಾಲಿನ ಕನಾ೯ಟಕ ರಾಜ್ಯ ಪ್ರಶಸ್ತಿ ಪುರಸ್ಕೃತ, ಶ್ರೀ ವಿದ್ಯಾವಿನಾಯಕ ಯುವಕಮಂಡಲ (ರಿ) ಹಳೆಯಂಗಡಿ. ದ.ಕ, ಶ್ರೀ ವಿದ್ಯಾ ವಿನಾಯಕ ರಜತಾಸೇವಾ ಟ್ರಸ್ಟ್ (ರಿ) ಹಳೆಯಂಗಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ (ರಿ) ಹಳೆಯಂಗಡಿ, ದ.ಕ., ಕಿಶೋರ -ಕಿಶೋರಿ ಸಂಘ ಹಳೆಯಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ.ಜಿ, ಯತೀಶ್ ಕೋಟ್ಯಾನ್, ಯುವತಿ ಮಂಡಲದ ಪ್ರದಾನ ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಕೋಶಾಧಿಕಾರಿ ಕುಮಾರಿ ನಿರ್ಮಿತ , ಯುವತಿ ಮಂಡಲ ಸದಸ್ಯರಾದ ನಿಶಾ, ಪ್ರಚೇತ ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಕಿಶೋರ ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳು ಈ ಗಿಡಗಳನ್ನು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ನೆಡುವಂತೆ ಪ್ರೇರೇಪಿಸಲಾಯಿತು. ಜಂಟಿ ಸಂಸ್ಥೆಯ ಸದಸ್ಯರು, ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!