ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ “ಸಸಿ ವಿತರಣೆ, ವ್ಯಕ್ಷ ಸಂರಕ್ಷಣೆ, ಪರಿಸರ ಜಾಗೃತಿ ಸಸಿ ನೆಡುವ” ಕಾರ್ಯಕ್ರಮ

ಹಳೆಯಂಗಡಿ : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ರುದ್ರಭೂಮಿ ಇಂದಿರಾನಗರದಲ್ಲಿ “ವಿಶ್ವ ಪರಿಸರ ದಿನಾಚರಣೆ ” ಅಂಗವಾಗಿ ದಿನಾಂಕ 08-06-2025 ರಂದು “ಸಸಿ ವಿತರಣೆ , ವ್ಯಕ್ಷ ಸಂರಕ್ಷಣೆ, ಪರಿಸರ ಜಾಗೃತಿ ” ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮವು ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ಇದರ ಸಹಕಾರದಲ್ಲಿ ಹಾಗೂ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ ಭಾರತ್, ದ.ಕ ಮಂಗಳೂರು, ಹಿಂದೂ ರುದ್ರಭೂಮಿ ಹಳೆಯಂಗಡಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ಜಂಟಿ ಆಶ್ರಯದಲ್ಲಿ ನಡೆಯಿತು.


ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ ಜಿ ಅವರು ಗಿಡ ನೆಟ್ಟು ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಸದಸ್ಯರಾದ ನಾಗರಾಜ್ ಪೂಜಾರಿ ಇವರು ಉಪಸ್ಥಿತರಿದ್ದು ಸಸಿ ನೆಟ್ಟು ಸಹಕರಿಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಉಪಧ್ಯಕ್ಷರಾದ ಧನಂಜಯ ಕದ್ರಿತೋಟ, ಪ್ರಧಾನ ಕಾರ್ಯದರ್ಶಿ ಹಿಮಕರ ಕದಿಕೆ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ರಶ್ವಿತ, ಪ್ರದಾನ ಕಾರ್ಯದರ್ಶಿ ಕುಮಾರಿ ದಿವ್ಯ ರಮೇಶ್ ಕೋಟ್ಯಾನ್, ಯುವಕ ಮಂಡಲದ ಸದಸ್ಯರುಗಳಾದ ಯತೀಶ್ ಕೋಟ್ಯಾನ್,  ಸುಧಾಕರ ಆರ್ ಅಮೀನ್, ತಾರಾನಾಥ ಕೊಳುವೈಲು, ಲೋಕೇಶ್ ಚಿಲಿಂಬಿ, ಜಗದೀಶ್ ಪಲಿಮಾರ್, ಉದಯಕುಮಾರ್, ಭವಾನಿ ಶಂಕರ್ , ಮನೋಜ್ ಕುಮಾರ್, ಸುಹಾಸ್ ಗೋಳಿದಡಿ, ಉಪಸ್ಥಿತರಿದ್ದರು.

error: Content is protected !!