ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಯುವ ಯಕ್ಷಗಾನ ಕಲಾವಿದೆ ಚಿನ್ಮಯಿ ಶೆಟ್ಟಿ ನಿಧನ

ಬೆಂಗಳೂರು : ಪುತ್ತೂರು ಮೂಲದ ಯುವ ಇಂಜಿನಿಯರ್ ಚಿನ್ಮಯಿ ಶೆಟ್ಟಿ (19) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೀಡಾಗಿ ನಿಧನರಾಗಿದ್ದಾರೆ.

ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ನಡೆದ ಕಾಲ್ತುಳಿತಕ್ಕೆ 11 ಜನ ಸಾವನಪ್ಪಿದ್ದಾರೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಚಿನ್ಮಯಿ ಶೆಟ್ಟಿ (20) ಸಾವನಪ್ಪಿದ್ದಾರೆ.

ಚಿನ್ಮಯಿ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರುತಾಲೂಕಿನ ಉಪ್ಪಿನಂಗಡಿ ಯವರು. ಈಕೆ ತಂದೆ ಕರುಣಾಕರ ಶೆಟ್ಟಿ, ತಾಯಿ ಪೂಜಾ. ಪ್ರಸ್ತುತ ಈ ಕುಟುಂಬ ಬೆಂಗಳೂರಿನ ನಾರಾಯಣ ನಗರದಲ್ಲಿ ನೆಲೆಸಿದ್ದಾರೆ.

ಓದಿನಲ್ಲೂ ಮುಂದೆ ಇದ್ದ ಈಕೆ, ಬೆಂಗಳೂರಿನ ಕನಕಪುರ ರಸ್ತೆಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ʼಯಕ್ಷತರಂಗ ಬೆಂಗಳೂರುʼನಲ್ಲಿ ಯಕ್ಷಗಾನ ಕಲಿಯುತ್ತಿದ್ದರು. ಜೊತೆಗೆ ಚಿನ್ಮಯಿ ಶೆಟ್ಟಿ ಅವರು ಪ್ರತಿಭಾ ವಂತ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದರು.

ಬುಧವಾರ ನಡೆದ ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ನಡೆದ ಅವಘಡದಲ್ಲಿ ಮೃತರಾದ ಕು. ಚಿನ್ಮಯಿಗೆ ಚಿರಶಾಂತಿ ಸಿಗಲಿ. ಅವಳ ತಂದೆ ತಾಯಿ ಹಾಗೂ ಬಂಧು ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಯಕ್ಷತರಂಗ ಬೆಂಗಳೂರು (ರಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!