
ಮಂಗಳೂರು: ಚೇಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂಡಾ ಇಲಾಖೆಯ ನಿವೇಶನ ಸಮತಟ್ಟು ಕಾಮಗಾರಿಯಿಂದ ಸಾರ್ವಜನಿಕರಿಗೆ ಹಾಗೂ ಕೃಷಿಭೂಮಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ದೂರಿದ್ದಾರೆ.
ಮಂಗಳೂರು ತಾಲೂಕು ಚೇಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂಡ ಇಲಾಖೆಯಿಂದ ನಿವೇಶನ ಸಮತಟ್ಟು ಕಾಮಗಾರಿ ನಡೆಯುತ್ತಿದ್ದು ತಗ್ಗು ಪ್ರದೇಶಕ್ಕೆ ತಡೆಗೋಡೆ ನಿರ್ಮಾಣ ಮಾಡದೇ ಮಣ್ಣು ತುಂಬುವುದರಿಂದ ಸದ್ರಿ ಪ್ರದೇಶದಲ್ಲಿರುವ ಮನೆಗಳಿಗೆ ಹಾಗೂ ಕೃಷಿಭೂಮಿಗೆ ಮಣ್ಣು ತಂಬಿ ವಾಸ್ತವ್ಯದ ಮನೆಗಳಿಗೆ ಹಾಗೂ ಕೃಷಿಗೆ ತೊಂದರೆಯಾಗುವುದರಿಂದ ಸ್ಥಳ ಪರಿಶೀಲಿಸಿ ತಡೆಗೋಡೆ ನಿರ್ಮಾಣ ಮಾಡಿದ ನಂತರ ವೈಜ್ಞಾನಿಕ ರೀತಿಯಲ್ಲಿ ಮಣ್ಣು ತುಂಬಿಸುವ ಕಾಮಗಾರಿ ನಡೆಸುವ ಬಗ್ಗೆ ತಮ್ಮ ಇಲಾಖೆಗೆ ನಾವು ಈ ಮೊದಲೆ ತಿಳಿಸಿರುತ್ತೇವೆ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ಹಾಗೂ ಕುಡಿಯುವ ನೀರಿನ ಬಾವಿಗಳಿಗೆ ಮಣ್ಣು ತುಂಬಿದ್ದು, ಮನೆಗಳಿಗೆ ಹಾನಿಯಾಗುವ ಹಾಗೂ ಕುಡಿಯುವ ನೀರಿಗೂ ತೊಂದರೆಯಾಗುವ ಸಂಭವವಿದೆ. ತಮ್ಮ ಇಲಾಖೆಯಿಂದ ನಡೆಯುವ ಕಾಮಗಾರಿಯಿಂದ ಮನೆಗಳಿಗೆ ಹಾಗೆ ಪ್ರಾಣಹಾನಿಯಾದರೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾದರೆ ಮಂಗಳೂರು ನಗರಾಭಿವೃದ್ಧಿ ನೇರ ಹೊಣೆಯಾಗುತ್ತದೆ. ಆದ್ದರಿಂದ ತಾವು ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದಾರೆ.
ವಿಡಿಯೋ ಸುದ್ದಿಗಾಗಿ ಕ್ಲಿಕ್ ಮಾಡಿ:
https://youtu.be/dDLx2N–mtM?si=_mdjBexTAGIuDPE4