ಸುರತ್ಕಲ್: ಭೀಕರ ಅಪಘಾತಕ್ಕೆ ಇಬ್ಬರು ದಾರುಣ ಮೃತ್ಯು

ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಸೂರಜ್ ಹೋಟೆಲ್ ಸಮೀಪ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಕೂಟರ್ ಸವಾರರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರನ್ನು ಕುಳಾಯಿ ಪ್ರಗತಿನಗರ ನಿವಾಸಿ ನೋಣಯ್ಯ ಬಂಗೇರ(63) ಹಾಗೂ ಕಾನ ನಿವಾಸಿ ನಿಯಾಜ್(34) ಎಂದು ಹೆಸರಿಸಲಾಗಿದೆ.


ಘಟನೆಯ ವಿವರ:
ನೋಣಯ್ಯ ಬಂಗೇರ ಅವರು ಬೀಡಿ ಗುತ್ತಿಗೆದಾರರಾಗಿದ್ದು ಮಧ್ಯಾಹ್ನ ತಮ್ಮ ಸ್ಕೂಟರ್ ನಲ್ಲಿ ತಮ್ಮ ಜೊತೆ ಕೆಲಸ ಮಾಡುವ ನಿಯಾಜ್ ನನ್ನು ಕುಳ್ಳಿರಿಸಿಕೊಂಡು ಮುಕ್ಕದಿಂದ ಬಂದು ಸೂರಜ್ ಹೋಟೆಲ್ ಮುಂಭಾಗ ಹೆದ್ದಾರಿಯಲ್ಲಿ ಯು ಟರ್ನ್ ಪಡೆಯುವ ವೇಳೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಜೀಪ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಜೀಪ್ ಅಡಿಯಲ್ಲಿ ಇಬ್ಬರೂ ಸಿಲುಕಿದ್ದು ಅವರ ಮೇಲೆಯೇ ಹಾದುಹೋದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಪಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಜೀಪ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!