“ಬಳ್ಕುಂಜೆ ಕಂಬಳ”ಕ್ಕೆ ಶಿಲಾನ್ಯಾಸ

ಸುರತ್ಕಲ್: ಎಪ್ರಿಲ್ 6 ರಂದು ನಡೆಯಲಿರುವ ಬಳ್ಕುಂಜೆ ಕಂಬಳದ ಪೂರ್ವಭಾವಿಯಾಗಿ ನೂತನ ಕಂಬಳ ಕರೆಗೆ ಶಿಲಾನ್ಯಾಸ ಕಾರ್ಯಕ್ರಮ ಬಳ್ಕುಂಜೆ ಕೊಟ್ನಾಯಗುತ್ತು ಬಳಿ ಗುರುವಾರ ಮುಂಜಾನೆ ನಡೆಯಿತು.


ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ಮತ್ತು ರಾಮದಾಸ್ ಆಚಾರ್ಯ ಮುಂಡ್ಕೂರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಬಳ್ಕುಂಜೆ ಗುತ್ತು, ಕಾರ್ಯಾಧ್ಯಕ್ಷ ಕೋಲ್ನಾಡುಗುತ್ತು ಕಿರಣ್ ಕುಮಾರ್ ಶೆಟ್ಟಿ, ಉದ್ಯಮಿ ವಿರಾರ್ ಶಂಕರ ಶೆಟ್ಟಿ ಮುಂಬೈ, ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು, ವೀರೇಂದ್ರ ಪೂಂಜ ಕೊಟ್ನಾಯ ಗುತ್ತು, ದಿನೇಶ್ ಸುವರ್ಣ ಬೆಳ್ಳಾಯರು, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಬಳ್ಕುಂಜೆ ಗ್ರಾಪಂ.ಅಧ್ಯಕ್ಷೆ ಮಮತಾ ಪೂಂಜ, ಸದಸ್ಯರಾದ ದಿನೇಶ್ ಪುತ್ರನ್, ನವೀನ್ ಶೆಟ್ಟಿ, ಐಕಳ ಗ್ರಾ. ಪಂ. ಸದಸ್ಯ ರಾಜೇಶ್ ಶೆಟ್ಟಿ, ಕೊಟ್ರಪಾಡಿ ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ ಕೆಳಗಿನಮನೆ, ಶೇಖರ್ ಶೆಟ್ಟಿ ಪಡುಮನೆ, ದಿನಕರ ಶೆಟ್ಟಿ, ಅಶೋಕ್ ಶೆಟ್ಟಿ, ಕೀರ್ತಿ ರಾಜ್ ಶೆಟ್ಟಿ, ಶಿವ ಶೆಟ್ಟಿ ರಾಮದಾಸ ಶೆಟ್ಟಿ ಬಾಳಿಕೆ ಮನೆ, ರಘುನಾಥ ಶೆಟ್ಟಿ, ಪ್ರಭಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ, ಗಂಗಾಧರ್ ಶೆಟ್ಟಿ ಬರ್ಕೆ ತೋಟ, ಪದ್ಮನಾಭ ಪಂಬದ, ಮೋಹನ್ ಕೋಟ್ಯಾನ್ ಶಿಮಂತೂರು, ಶ್ಯಾಮ್ ಪ್ರಸಾದ್ ಪಡುಪಣಂಬೂರು, ನೆಲ್ಸನ್ ಬಳ್ಕುಂಜೆ, ಧರ್ಮಾನಂದ ಶೆಟ್ಟಿಗಾರ್, ಉತ್ತಮ್ ಪೂಜಾರಿ ಮೊಯಿಲೊಟ್ಟು ಮತ್ತಿತರರು ಉಪಸ್ಥಿತರಿದ್ದರು.

 

error: Content is protected !!