ಮೂಲ್ಕಿ: ನಿರಂತರವಾಗಿ ಸುರಿದ ಮಳೆಯಿಂದ ನಂದಿನಿ ನದಿ ಮನೆಗಳಿಗೆ ನುಗ್ಗಿದ್ದು, ತೀರದ ಮೂಲ್ಕಿ ತಾಲ್ಲೂಕಿನ ವಿವಿಧ ಗ್ರಾಮದ 29 ಮನೆಗಳಲ್ಲಿ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದ್ದು, ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ನಿರ್ಮಿಸಲಾಗಿದೆ.
ನಂದಿನಿ ನದಿಯ ತೀರ ಪ್ರದೇಶವಾದ ಕಿಲೆಂಜೂರು, ನಡುಗೋಡು, ಪಂಜ, ಕರಿತೋಟ ಪ್ರದೇಶಗಲ್ಲಿ ನೆರೆ ಹಾವಳಿ ಹೆಚ್ಚಾಗಿದೆ. ಪಂಜದ 26 ಹಾಗೂ ನಡುಗೋಡಿನ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅವರೆಲ್ಲರೂ ತಮ್ಮ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಪಂಜದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ನಿರ್ಮಿಸಿಕೊಂಡು ಪ್ರವಾಹದಿಂದ ಮನೆಯಿಂದ ದೂರವಾದವರನ್ನು ಆರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲ್ಕಿ ತಾಲ್ಲೂಕಿನ ಕಂದಾಯ ನಿರೀಕ್ಷಕ ಮೋಹನ್ ತಿಳಿಸಿದ್ದಾರೆ.
ಇನ್ನುಳಿದಂತೆ ಮೂಲ್ಕಿಯ ಮಟ್ಟು, ಬಪ್ಪನಾಡು, ಸಸಿಹಿತ್ಲು, ಕೊಳಚಿಕಂಬಳ ಪ್ರದೇಶದಲ್ಲಿಯೂ ನದಿ ನೀರು ಉಕ್ಕಿ ಹರಿಯುತ್ತಿದ್ದು ಇನ್ನೆರಡು ದಿನ ಮಳೆ ನಿರಂತರವಾಗಿ ಸುರಿದಲ್ಲಿ ಈ ಭಾಗದಲ್ಲಿಯೂ ಗಂಜಿ ಕೇಂದ್ರವನ್ನು ನಿರ್ಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದ ಯಾವುದೇ ಅಪಾಯ ಕಂಡು ಬಂದಿಲ್ಲ ನೂರಾರು ಎಕ್ರೆ ಕೃಷಿ ಭೂಮಿಯು ಉಪ್ಪು ನೀರಿನಿಂದ ಆವೃತವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj